ನವದೆಹಲಿ: ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಅವರು ಹಂಚಿಕೊಂಡ “ಟೂಲ್ ಕಿಟ್” ಪ್ರಕರಣಕ್ಕೆ ಸಂಬಂಧಿಸಿದಂತೆ ದಿಶಾ ರವಿ ಅವರ ಸಂಪರ್ಕ ಸೋಮವಾರ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಅವರ ಬಂಧನದ ಬಳಿಕ ಕೆಲವರು ಅವರು ಬೆಂಬಲಕ್ಕೆ ನಿಂತಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಈ ಬಗ್ಗೆ ಟ್ವೀಟ್ ಮಾಡಿ, ದಿಶಾ ರವಿ ಅವರ ಬೆಂಬಲಿಗರ ಪರವಾಗಿ ಒಟ್ಟುಗೂಡುತ್ತಿರುವ ಅರಾಜಕತಾವಾದಿಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
“21 ವರ್ಷದವಳು, ದುಡಿಯುವ ಏಕೈಕ ವ್ಯಕ್ತಿ, ಒಂಟಿ ತಾಯಿಯ ಮಗಳು, ಹವಾಮಾನ ಬದಲಾವಣೆ ಕಾರ್ಯಕರ್ತೆ ಎಂದೆಲ್ಲಾ ಹೇಳುತ್ತಾ ದಿಶಾ ರವಿಯ ಬೆನ್ನಿಗೆ ನಿಂತಿರುವ ಅನೇಕ ಅರಾಜಕತಾವಾದಿಗಳ ನಿಜಬಣ್ಣವನ್ನು ಟೂಲ್ಕಿಟ್ ನಾಟಕ ಬಹಿರಂಗಪಡಿಸಲಿದೆ. ಅವರು ಬಚ್ಚಿಟ್ಟುಕೊಳ್ಳಲು ಓಡುವ ಪರಿಸ್ಥಿತಿ ಬರಲಿದೆ. ವಾಟ್ಸಾಪ್ ಗ್ರೂಪ್, ಎಡಿಟಿಂಗ್ ಆಪ್ಶನ್, ಸಂಭಾಷಣೆ ಅನೇಕ ವ್ಯಕ್ತಿಗಳನ್ನು ಬಹಿರಂಗಪಡಿಸಲಿದೆ” ಎಂದು ಬಿ.ಎಲ್ ಸಂತೋಷ್ ಟ್ವಿಟ್ನಲ್ಲಿ ಹೇಳಿದ್ದಾರೆ.
“ಬೆಂಗಳೂರು ಗ್ರೇಟಾ ಥನ್ಬರ್ಗ್, ಸಸ್ಯಹಾರಿ, ವಿದ್ಯಾರ್ಥಿ, 21 ವರ್ಷದವಳು… ಆಕೆಯ ಪಾಪವನ್ನು ತೊಳೆಯಲು ಎಷ್ಟೊಂದು ಪ್ರಯತ್ನಗಳು … !! ಒಬ್ಬ ಅರಾಜಕತಾವಾದಿಯೂ ಪ್ರಶ್ನೆಗೆ ಉತ್ತರಿಸಲು ಸಿದ್ಧವಾಗಿಲ್ಲ .. 21 ವರ್ಷದ ವಿದ್ಯಾರ್ಥಿಗೆ ಟೂಲ್ಕಿಟ್ ೆಡಿಟ್ ಮಾಡಲು ಹೇಗೆ ಪ್ರವೇಶ ಸಿಕ್ಕಿತು” ಎಂದಿದ್ದಾರೆ.
ಸಂತೋಷ್ ಅವರ ಪ್ರಕಾರ, ದಿಶಾ ರವಿ ಅವರು ಭಾರತವನ್ನು ಕೆಣಕುವ ಜಾಗತಿಕ ಪಿತೂರಿಯ ಹಲವು ಅಂಶಗಳನ್ನು ಬಹಿರಂಗಪಡಿಸಲಿದ್ದಾರೆ.
ದಿಶಾ ರವಿ ಅವರನ್ನು ಬೆಂಬಲಿಸುತ್ತಿರುವವರ ಮೇಲೆ ವಾಗ್ದಾಳಿ ನಡೆಸಿದ ಬಿ.ಎಲ್.ಸಂತೋಷ್ ಅವರು, ಟೂಲ್ ಕಿಟ್ ಡಾಕ್ಯುಮೆಂಟ್ ಅನ್ನು ಎಡಿಟ್ ಮಾಡಲು ದಿಶಾ ರವಿ ಅವರಿಗೆ ಹೇಗೆ ಪ್ರವೇಶ ಸಿಕ್ಕಿತು ಎಂಬಪ್ರಶ್ನೆಗೆ ಯಾರೂ ಉತ್ತರಿಸುತ್ತಿಲ್ಲ ಎಂದಿದ್ದಾರೆ.
ಕೃಷಿ ಕಾನೂನುಗಳಿಗೆ ವಿರುದ್ಧವಾದ ರೈತರ ಪ್ರತಿಭಟನೆಯಲ್ಲಿ ಯುಎಪಿಎ ಅಡಿಯಲ್ಲಿ ಆರೋಪಿಗಳಾದ ವರವರ ರಾವ್, ಸುಧಾ ಭರದ್ವಾಜ್ ಮತ್ತು ಉಮರ್ ಖಾಲಿದ್ ಅವರನ್ನು ಬಿಡುಗಡೆ ಮಾಡುವ ಬೇಡಿಕೆಗಳನ್ನು ಇಡಲಾಗಿತ್ತು. ಈ ಆರೋಪಿಗಳಿಗೂ, ರೈತರ ಪ್ರತಿಭಟನೆ ಅಥವಾ ಕೃಷಿ ಕಾನೂನುಗಳಿಗೆ ಯಾವುದೇ ಸಂಬಂಧವಿರಲಿಲ್ಲ. ಪ್ರತಿಭಟನೆಯಲ್ಲಿ ಖಲಿಸ್ತಾನ ಪರವಾದ ಅಂಶಗಳು ಮತ್ತು ಪಾಪ್ ಗಾಯಕಿ ರಿಹಾನ್ನಾ ಮತ್ತು ಹವಾಮಾನ ಬದಲಾವಣೆ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಸೇರಿದಂತೆ ಜಾಗತಿಕ ಗಣ್ಯರು ರೈತರ ಆಂದೋಲನದಲ್ಲಿ ಮಧ್ಯಪ್ರವೇಶ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಗ್ರೇಟಾ ಥನ್ಬರ್ಗ್ ಅವರಿಗೆ ಟೂಲ್ ಕಿಟ್ ಅನ್ನು ಬೆಂಗಳೂರು ನಿವಾಸಿ ದಿಶಾ ರವಿ ಅವರು ನೀಡಿದರು ಎಂದು ಹೇಳಲಾಗಿದೆ. ದಿಶಾ ರವಿ ಬಂಧನದ ವಿರುದ್ಧ ಕಾಂಗ್ರೆಸ್ ಕೂಡ ಆಕ್ರೋಶ ವ್ಯಕ್ತಪಡಿಸಿದೆ.
As the the great drama of #Toolkit unfolds many anarchists who are rallying behind #DishaRavi as 21 year old, sole bread winner, daughter of single mother, climate change activist will run for cover. WhatsApp groups, editing option, conversations will unravel many a characters .
— B L Santhosh (@blsanthosh) February 15, 2021
Bengaluru Greta Thunberg , Vegan , sole bread winner , student , 21 year old , passionate activist ….. so many attempts to white wash a sin …!! Not one anarchist ready to answer the question .. How 21 year old student got access to edit #Toolkit .
— B L Santhosh (@blsanthosh) February 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.