ನವದೆಹಲಿ: ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಮ್ ನಬಿ ಆಜಾದ್ ಫೆಬ್ರವರಿ 9 ರಂದು ತಮ್ಮ ವಿದಾಯ ಭಾಷಣ ಮಾಡಿದ್ದು, “ನಾವು ಭಾರತದಲ್ಲಿದ್ದೇವೆ ಎಂದು ಪ್ರತಿಯೊಬ್ಬ ಭಾರತೀಯ ಮುಸ್ಲಿಮರು ಹೆಮ್ಮೆ ಪಡಬೇಕು” ಎಂದು ಹೇಳಿದರು.
ರಾಜ್ಯಸಭಾ ಸದಸ್ಯರಾಗಿರುವ ಆಜಾದ್ ಅವರ ಅವಧಿ ಫೆಬ್ರವರಿ 15 ರಂದು ಅಂತ್ಯವಾಗಲಿದೆ. ಅವರು ಕಳೆದ 28 ವರ್ಷಗಳಿಂದ ಮೇಲ್ಮನೆಯ ಸದಸ್ಯರಾಗಿದ್ದಾರೆ. ಅವರು 10 ವರ್ಷಗಳ ಕಾಲ ಲೋಕಸಭೆಯ ಸದಸ್ಯರಾಗಿದ್ದರು ಮತ್ತು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದರು.
“ನಾನು ಎಂದಿಗೂ ಪಾಕಿಸ್ಥಾನಕ್ಕೆ ಹೋಗದ ಅದೃಷ್ಟವಂತ ಜನರಲ್ಲಿ ಒಬ್ಬನಾಗಿದ್ದೇನೆ. ಪಾಕಿಸ್ಥಾನದ ಅಥವಾ ವಿಶ್ವದ ಇತರ ಮುಸ್ಲಿಂ ರಾಷ್ಟ್ರಗಳ ವ್ಯವಹಾರಗಳ ಸ್ಥಿತಿಯನ್ನು ನೋಡಿದಾಗ, ನಾವು ಭಾರತದಲ್ಲಿದ್ದೇವೆ ಎಂದು ಪ್ರತಿಯೊಬ್ಬ ಮುಸ್ಲಿಮರೂ ಹೆಮ್ಮೆ ಪಡಬೇಕು” ಎಂದು ಆಜಾದ್ ಹೇಳಿದರು. ಅವರ ಭಾಷಣವು ಉರ್ದು ಕವನಗಳೊಂದಿಗೆ ಸಂಯೋಜಿಸಲ್ಪಟ್ಟಿತು.
ಪ್ರತಿಪಕ್ಷಗಳು ಸಮಸ್ಯೆಗಳ ವಿಷಯದಲ್ಲಿ ಹೋರಾಟ ನಡೆಸಲು ಸಾಧ್ಯವಿಲ್ಲ ಎಂಬುದನ್ನು ನಾನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕಲಿತಿದ್ದೇನೆ ಎಂದಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಿಂದ ನವದೆಹಲಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಇತರ ಸದಸ್ಯರು ವಿವರಿಸಿದ ನಂತರ ಆಜಾದ್ ಅವರು ಮೇಲ್ಮನೆಯಲ್ಲಿ ಮಾತನಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.