ನವದೆಹಲಿ: ಕೃಷಿ ಸಚಿವ ತೋಮರ್ ಅವರು ಗೆ ರಾಜ್ಯಸಭೆಯಲ್ಲಿ ವಿಪಕ್ಷಗಳ ಚಳಿ ಬಿಡಿಸಿದ್ದಾರೆ . ಕೃಷಿ ಮಸೂದೆಗೆ ವಿರೋಧ ಮಾಡ್ತಿರೋ ಪಂಜಾಬ್ ರಾಜ್ಯದಲ್ಲಿ ಒಪ್ಪಂದದ ಕೃಷಿ ಇದೆ. ಅಲ್ಲಿ ರೈತರನ್ನು ಐದು ವರ್ಷದಲ್ಲಿ ಜೈಲಿಗಟ್ಟುವ ಕಾನೂನಿದೆ. ರೈತರಿಗೆ 5 ಲಕ್ಷ ದಂಡ ಹಾಕುವ ಕಾನೂನು ಇದೆ. ನಾವು ಮಾಡಿರುವ ಕಾನೂನಿನಲ್ಲಿ ಅಂತಹ ಅಂಶಗಳೇ ಇಲ್ಲ ಎಂದು ಅವರು ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಬಿಜೆಪಿ ಸರ್ಕಾರ ನೀರು ಹರಿಸಿ ಕೃಷಿ ಮಾಡುವ ವಿಚಾರ ಹೇಳುತ್ತಿದೆ. ವಿರೋಧಪಕ್ಷಗಳು ನೆತ್ತರು ಹರಿಸಿ ಕೃಷಿ ಮಾಡುವ ಬಗ್ಗೆ ಮಾತನಾಡುತ್ತಿದೆ. ರೈತರಿಗೆ ಮಾರಕ ಅನ್ನಿಸುವ ಯಾವ ಅಂಶ ನಾವು ತಂದಿರುವ ಕೃಷಿ ಮಸೂದೆಯಲ್ಲಿ ಇದೆ ಎಂದು ಹೇಳಿ?” ಎಂದು ವಿರೋಧಪಕ್ಷಗಳಿಗೆ ಕೃಷಿ ಸಚಿವ ತೋಮರ್ ಸವಾಲ್ ಹಾಕಿದ್ದಾರೆ.
“ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದಲ್ಲಿ ಗ್ರಾಮ, ಬಡವರು ಮತ್ತು ರೈತರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ರೈತ ಸಂಘಗಳೊಂದಿಗೆ ಸರಣಿ ಮಟ್ಟದ ಮಾತುಕತೆ ನಡೆಸಿದರೂ, ಯಾವುದೇ ಸಂಘಟನೆಗಳು ವಿವಾದಾಸ್ಪದವೆಂದು ಅವರು ಭಾವಿಸುವ ನಿಬಂಧನೆಗಳ ಬಗ್ಗೆ ಸ್ಪಷ್ಟತೆ ನೀಡಿಲ್ಲ. ಕೃಷಿ ಕಾನೂನುಗಳು ರೈತರು ತಮ್ಮ ಉತ್ಪನ್ನಗಳನ್ನು ಎಪಿಎಂಸಿ ಮಂಡಿಗಳ ಹೊರಗೆ ಮಾರಾಟ ಮಾಡಲು ಅವಕಾಶ ಮಾಡಿಕೊಡುತ್ತವೆ. ಮುಕ್ತ ಮಾರುಕಟ್ಟೆಯಲ್ಲಿ ರೈತರು ಮಂಡಿಯಲ್ಲಿ ವಿಧಿಸುವ ತೆರಿಗೆಯನ್ನು ಪಾವತಿಸುವ ಅಗತ್ಯವಿಲ್ಲ” ಎಂದು ಅವರು ಹೇಳಿದರು.
ಮಂಡಿಯಲ್ಲಿನ ತೆರಿಗೆ ವ್ಯವಸ್ಥೆಯನ್ನು ವಿರೋಧಿಸುವ ಬದಲು, ಕೆಲವು ರಾಜ್ಯಗಳ ರೈತರು ಹೊಸ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ.
ಕೃಷಿ ಕಾಯ್ದೆಗಳಲ್ಲಿ ಗುತ್ತಿಗೆ ಕೃಷಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ರೈತರ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಹೊಸ ಕಾನೂನುಗಳ ನಿಬಂಧನೆಗಳು ರೈತರಿಗೆ ಯಾವಾಗ ಬೇಕಾದರೂ ಒಪ್ಪಂದದಿಂದ ಹೊರಹೋಗಲು ಅವಕಾಶ ನೀಡುತ್ತದೆ ಎಂದು ಪ್ರತಿಪಾದಿಸಿದರು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಯತ್ತ ಸರ್ಕಾರ ಬದ್ಧವಾಗಿದೆ ಮತ್ತು ಹೊಸ ಕೃಷಿ ಕಾನೂನುಗಳು ಅದನ್ನು ಸಾಧಿಸಲು ಒಂದು ಸಾಧನವಾಗಿದೆ ಎಂದು ತೋಮರ್ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.