ಬೆಂಗಳೂರು: ಉಕ್ರೇನ್ ರಕ್ಷಣಾ ಸಚಿವ ಆಂಡ್ರಿ ವಾಸಿಲೊವಿಚ್ ತರನ್ ತಮ್ಮ ಸರ್ಕಾರದ ಇತರ ಪ್ರತಿನಿಧಿಗಳೊಂದಿಗೆ ಸೋಮವಾರ ಬೆಂಗಳೂರಿನ ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು.
ಏರೋ ಇಂಡಿಯಾ 2021 ಈವೆಂಟ್ನಲ್ಲಿ ಭಾಗವಹಿಸುವ ಸಲುವಾಗಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ.
“ಈ ಭೇಟಿ ತುಂಬಾ ರೋಮಾಂಚನಕಾರಿ ಮತ್ತು ಆಸಕ್ತಿದಾಯಕವಾಗಿದೆ, ನಾನು ಈ ಮೊದಲು ದೇವಾಲಯಕ್ಕೆ ಹೋಗಿಲ್ಲ” ಎಂದು ಅವರು ಹೇಳಿದ್ದಾರೆ.
ಇಸ್ಕಾನ್ ಬೆಂಗಳೂರಿನ ಪ್ರಕಾರ, ನಿಯೋಗವು ದೇವಾಲಯದ ಆವರಣದಲ್ಲಿರುವ ಅಕ್ಷಯ ಪಾತ್ರ ಪ್ರತಿಷ್ಠಾನದ ಅಡಿಗೆ ಸೌಲಭ್ಯಕ್ಕೂ ಭೇಟಿ ನೀಡಿತು ಮತ್ತು ಪ್ರತಿದಿನ 1.8 ಮಿಲಿಯನ್ ಜನರಿಗೆ ಅಡುಗೆ ತಯಾರಿಸುವ ಕಾರ್ಯಾಚರಣೆಗಳನ್ನು ನೋಡಿ ಮಾಹಿತಿ ಪಡೆಯಿತು.
ಏರೋ ಇಂಡಿಯಾ ಶೋ ಅನ್ನು ಫೆಬ್ರವರಿ 3 ರಿಂದ 5 ರವರೆಗೆ ಬೆಂಗಳೂರಿನ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಿಗದಿಪಡಿಸಲಾಗಿದೆ.
@DefenceU Minister of Ukraine exhilarated by the visit to @ISKCONBangalore temple
Mr. Andriy Taran who was accompanied by his Deputy & other delegates in the visit, remarked, "This visit has been very exciting and interesting, I have never been to a temple like this before." #VIP pic.twitter.com/OvQVEr1qUV— ISKCON Bangalore (@ISKCONBangalore) February 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.