ನವದೆಹಲಿ: ಭಾರತ ಸರ್ಕಾರವು ಜನವರಿ 23 ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಪ್ರತಿ ವರ್ಷ ʼಪರಾಕ್ರಮ ದಿವಸ್ʼ ಆಗಿ ಅಚರಿಸಲು ನಿರ್ಧರಿಸಿದೆ. ಈ ಬಗ್ಗೆ ಕೇಂದ್ರ ಸಂಸ್ಕೃತಿ ಸಚಿವಾಲಯ ಅಧಿಕೃತ ಪ್ರಕಟನೆ ಹೊರಡಿಸಿದೆ.
ಸುಭಾಷ್ಚಂದ್ರ ಬೋಸ್ ಜನಿಸಿದ್ದು 1897ರ ಜನವರಿ 23ರಂದು, ಒಡಿಶಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ 14 ಜನ ಮಕ್ಕಳಲ್ಲಿ ಸುಭಾಷ್ 9 ನೇಯವರು. ದೇಶಭಕ್ತಿಯನ್ನು ಉಸಿರಾಗಿಸಿಕೊಂಡ ಅವರು ಇಂದಿಗೂ ಯುವ ಮನಗಳ ನೆಚ್ಚಿನ ಸ್ವಾತಂತ್ರ್ಯ ಸೇನಾನಿ.
ಅಪ್ರತಿಮ ದೇಶಭಕ್ತರಾಗಿ ನೇತಾಜೀ ಸುಭಾಷ್ ಚಂದ್ರ ಬೋಸ್ ಸಾಕಷ್ಟು ತ್ಯಾಗಗಳನ್ನು ಮಾಡಿದ್ದಾರೆ. ಅದರೆ ಅವರ ತ್ಯಾಗ, ಸೇವೆಯನ್ನು ಹಿಂದಿನ ಸರ್ಕಾರಗಳು ಗುರುತಿಸಿ ಪುರಸ್ಕರಿಸುವ ಕಾರ್ಯವನ್ನು ಮಾಡಿರಲಿಲ್ಲ. ಅದರೀಗ ಅವರ ಜನ್ಮದಿನವನ್ನು ʼಪರಾಕ್ರಮ ದಿವಸ್ʼ ಅಗಿ ಅಚರಿಸಲು ಸರ್ಕಾರ ನಿರ್ಧರಿಸಿರುವುದು ಅವರಿಗೆ ಸಲ್ಲಿಸುತ್ತಿರುವ ಅತ್ಯುನ್ನತ ಗೌರವವಾಗಿದೆ.
ನೇತಾಜೀ ಜನ್ಮದಿನವನ್ನು ಸ್ಮರಣೀಯ ರೀತಿಯಲ್ಲಿ ಆಚರಿಸುವಂತೆ ಹಿಂದಿನಿಂದಲೂ ಕುಗು ಕೇಳಿ ಬಂದಿತ್ತು. ಅದರಂತೆ ಅವರ ಜನ್ಮದಿನ ಇನ್ನು ಮುಂದೆ ಸ್ಮರಣೀಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.