ನವದೆಹಲಿ: ಭಾರತದ ಇತಿಹಾಸವನ್ನು ತಿರುಚುವ ಕಾರ್ಯವನ್ನು ಎಡಪಂಥೀಯ ಇತಿಹಾಸಕಾರರು ಮಾಡುತ್ತಲೇ ಬಂದಿದ್ದಾರೆ. ಇಂತಹ ಇತಿಹಾಸಕಾರರು ಬರೆದ ಪುಸ್ತಕಗಳೇ NCERT ಇತಿಹಾಸ ಪಠ್ಯ ಪುಸ್ತಕಗಳಾಗಿವೆ. ಇವರು ಬರೆದ ಸುಳ್ಳುಗಳನ್ನು ಓದುವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂಬಂತೆ, NCERT ನಿರ್ವಹಿಸುವ ಇತಿಹಾಸ ಪಠ್ಯಪುಸ್ತಕಗಳ ಬಗ್ಗೆ ಅದಕ್ಕೆಯೇ ಅರಿವು ಇಲ್ಲ ಎಂಬುದು ಆರ್ಟಿಇ ಅರ್ಜಿಯಿಂದ ಬಹಿರಂಗವಾಗಿದೆ.
03/09/2020 ರಂದು ರಿಜಿಸ್ಟ್ರೇಸನ್ ನಂ. ಎನ್ಎಸ್ಇಆರ್ಟಿ / ಆರ್ / ಇ / 20/00324 / ಆರ್ಟಿಐ ಅರ್ಜಿಯಲ್ಲಿ, 12 ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ ಉಲ್ಲೇಖವಾದ ಅಂಶಗಳ ಮೂಲಗಳ ಬಗ್ಗೆ ಎರಡು ಪ್ರಶ್ನೆಗಳನ್ನು ಕೇಳಲಾಯಿತು. ಆ ಪ್ರಶ್ನೆಗಳೆಂದರೆ-
1) ಭಾರತೀಯ ಇತಿಹಾಸ ಭಾಗ II (ಹನ್ನೆರಡನೇ ತರಗತಿ) ಯ ಪಠ್ಯಪುಸ್ತಕದ ಪುಟ 234 ರ ಎರಡನೇ ಪ್ಯಾರಾದಲ್ಲಿ, “ಯುದ್ಧಗಳ ಸಮಯದಲ್ಲಿ ದೇವಾಲಯಗಳು ನಾಶವಾದಾಗಲೂ ಷಹಜಹಾನ್ ಮತ್ತು ಔರಂಗಜೇಬನ ಆಳ್ವಿಕೆಯಲ್ಲಿ ಅನುದಾನಗಳು ನೀಡಿ ಅವುಗಳ ದುರಸ್ತಿ ಮಾಡಲಾಗಿದೆ” ಎಂಬ ಉಲ್ಲೇಖದ ಮೂಲವನ್ನು ಒದಗಿಸಿ.
2)ಅಲ್ಲದೇ, ದಯವಿಟ್ಟು ಔರಂಗಜೇಬ ಮತ್ತು ಶಹಜಹಾನ್ ದುರಸ್ತಿ ಮಾಡಿದ ದೇವಾಲಯಗಳ ಸಂಖ್ಯೆಯನ್ನು ಒದಗಿಸಿ.
ಈ ಎರಡೂ ಪ್ರಶ್ನೆಗಳಿಗೆ ಎನ್ಸಿಇಆರ್ಟಿಯ ಉತ್ತರವೆಂದರೆ, “ಮಾಹಿತಿ ಇಲಾಖೆಯ ದಾಖಲೆಗಳಲ್ಲಿ ಲಭ್ಯವಿಲ್ಲ” ಎಂಬುದು.
ಆರ್ಟಿಐ ಉತ್ತರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಡಾ. ಇಂದು ವಿಶ್ವನಾಥನ್, “ಬೇರೆ ರೀತಿಯಲ್ಲಿ ಹೇಳುವುದಾದರೆ, ಭಾರತೀಯ ಶಾಲಾ ಪಠ್ಯಪುಸ್ತಕಗಳಲ್ಲಿ ಈ ದರೋಡೆಕೋರರು ನಿಜಕ್ಕೂ ಪರೋಪಕಾರಿ, ಉದಾರ ಆಡಳಿತಗಾರರು ಮತ್ತು ಹಿಂದೂಗಳ ಬಗ್ಗೆ ಅನುಭೂತಿ ಹೊಂದಿದ್ದವರು ಎಂದು ಹೇಳಲಾಗುತ್ತಿದೆ. ಆದರೆ ಈ ಪುಸ್ತಕಗಳನ್ನು ಪ್ರಕಟಿಸುವ ಸಂಸ್ಥೆಗೆ ಅದರ ಮೂಲದ ಬಗ್ಗೆ ದೃಢೀಕೃತ ಮಾಹಿತಿ ಒದಗಿಸಲು ಸಾಧ್ಯವಾಗುತ್ತಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.