ನವದೆಹಲಿ: ಈ ಗಣರಾಜ್ಯೋತ್ಸವದಂದು ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪೀಪಲ್ ಲಿಬರೇಶನ್ ಆರ್ಮಿ ಜೊತೆಗಿನ ಕಾದಾಟದಲ್ಲಿ ದೇಶವನ್ನು ರಕ್ಷಿಸುತ್ತಾ ಹುತಾತ್ಮರಾದ ಕೆಚ್ಚೆದೆಯ ವೀರರನ್ನು ಭಾರತ ಗೌರವಿಸಲಿದೆ ಎಂದು ಮೂಲಗಳು ತಿಳಿಸಿವೆ.
16 ಬಿಹಾರ ಬೆಟಾಲಿಯನ್ನ ಕರ್ನಲ್ ಬಿ ಸಂತೋಷ್ ಬಾಬು ಸೇರಿದಂತೆ ಕನಿಷ್ಠ ಐದು ಭಾರತೀಯ ಸೇನಾ ಸೈನಿಕರಿಗೆ ಮರಣೋತ್ತರವಾಗಿ ಶೌರ್ಯ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಭಾರತ ಮತ್ತು ಚೀನಾದ ನಡುವೆ ಕಳೆದ ವರ್ಷ ಹಿಂಸಾತ್ಮಕ ಸಂಘರ್ಷ ನಡೆದಿತ್ತು. 1962 ರ ಇಂಡೋ-ಚೀನಾ ಯುದ್ಧದ ನಂತರ ಭಾರತ ಮತ್ತು ಚೀನಾ ನಡುವಿನ ದ್ವೇಷ ಮೊದಲ ಬಾರಿಗೆ ತಾರಕಕ್ಕೇರಿತ್ತು.
ಭಾರತೀಯ ಸೇನೆಯು ಧೈರ್ಯದಿಂದ ಹೋರಾಡಿ ಚೀನಾದ ಕಡೆಗೆ 40 ಕ್ಕೂ ಹೆಚ್ಚು ಸಾವುನೋವುಗಳನ್ನು ಉಂಟುಮಾಡಿತು. ಕಮಾಂಡಿಂಗ್ ಆಫೀಸರ್ ಸೇರಿದಂತೆ ಚೀನಾದ 35 ಸೈನಿಕರು ಸಾವನ್ನಪ್ಪಿರಬಹುದು ಎಂದು ಯುಎಸ್ ಗುಪ್ತಚರ ವರದಿಗಳು ಹೇಳಿಕೊಂಡಿವೆ.
16 ಬಿಹಾರ ಬೆಟಾಲಿಯನ್ನ ಕರ್ನಲ್ ಬಿ ಸಂತೋಷ್ ಬಾಬು ಸೇರಿದಂತೆ ಇಪ್ಪತ್ತು ಭಾರತೀಯ ಸೈನಿಕರು ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ಏಳು ಗಂಟೆಗಳ ಕಾಲ ನಡೆದ ಸಂಘರ್ಷದಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.