ನವದೆಹಲಿ: ಕೇಂದ್ರ ಸರ್ಕಾರವು ತನ್ನ ಪ್ರಸ್ತುತ ನಡೆಯುತ್ತಿರುವ ಖರೀದಿ ಕಾರ್ಯಾಚರಣೆಯಲ್ಲಿ ದಾಖಲೆಯ 47.9 ಮಿಲಿಯನ್ ಟನ್ ಖಾರಿಫ್ (ಮಾನ್ಸೂನ್ ಬೆಳೆಗಳು) ಭತ್ತವನ್ನು ಖರೀದಿಸಿದೆ, ಇದು ಕಳೆದ ವರ್ಷಕ್ಕಿಂತ 23% ಹೆಚ್ಚಾಗಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ.
ಈ ಖರೀದಿಗಳಿಗಾಗಿ ಸುಮಾರು 6 ಮಿಲಿಯನ್ ರೈತರಿಗೆ 9000 ಕೋಟಿ ರೂ.ಗಳ ಕನಿಷ್ಠ ಬೆಂಬಲ ಬೆಲೆ ನೀಡಲಾಗಿದೆ ಎಂದು ಮಾಹಿತಿ ತಿಳಿಸಿದೆ.
ದೆಹಲಿಯ ಗಡಿಯಲ್ಲಿ ಕೆಲ ರೈತರು ಎಂಎಸ್ಪಿಯನ್ನು ಕಾನೂನುಬದ್ಧ ಮಾಡುವಂತೆ ಒತ್ತಾಯಿಸಿರುವ ಸಮಯದಲ್ಲಿ ಹೆಚ್ಚಿನ ಖರೀದಿ ನಡೆದಿದೆ ಎಂಬುದು ವಿಶೇಷ.
ಭತ್ತವು ಬೇಸಿಗೆಯ ಮುಖ್ಯ ಬೆಳೆಯಾಗಿದ್ದು, ಪಂಜಾಬ್ನಂತಹ ರಾಜ್ಯಗಳಲ್ಲಿನ ಕೃಷಿಕರ ಆದಾಯವನ್ನು ಹೆಚ್ಚಿಸುತ್ತದೆ. ಆಹಾರ ಸಚಿವಾಲಯದ ಅಧಿಕೃತ ಮಾಹಿತಿ ಪ್ರಕಾರ, ಬೇಸಿಗೆಯ ಭತ್ತಕ್ಕಾಗಿ (2020-21) ಸರಕಾರದ ಒಟ್ಟು ಖರೀದಿ 74.2 ಮಿಲಿಯನ್ ಟನ್ಗಳನ್ನು ಮುಟ್ಟುವ ಸಾಧ್ಯತೆಯಿದೆ, ಇದು 2019-20ರ ಅವಧಿಯಲ್ಲಿ ಸಂಗ್ರಹಿಸಿದ ಒಟ್ಟು 62.7 ದಶಲಕ್ಷಕ್ಕಿಂತ 18% ಹೆಚ್ಚಾಗಿದೆ. ಒಟ್ಟು ಭತ್ತ ಖರೀದಿಯಲ್ಲಿ ಪಂಜಾಬ್ನ ಪಾಲು 42% ಆಗಿದೆ.
ಭತ್ತ ಖರೀದಿ ಕೇಂದ್ರಗಳ ಸಂಖ್ಯೆಯನ್ನು ಸರ್ಕಾರವು 27% ರಷ್ಟು ಹೆಚ್ಚಿಸಿದೆ, ಈಗ ಕೇಂದ್ರಗಳ ಸಂಖ್ಯೆ 39,122 ರಷ್ಟಿದೆ, ಇದು ಕಳೆದ ವರ್ಷ 30,709 ರಷ್ಟಿತ್ತು ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.