ನವದೆಹಲಿ: ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮದ ಮೂಲಕ ಡಿಜಿಟಲ್ ಬಳಕೆಯ ಅಂತರವನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸಬೇಕು. ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಇನ್ನೂ ಡಿಜಿಟಲ್ ಸೇವೆಗಳ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಪರಿಣಾಮಕಾರಿ ಆವಿಷ್ಕಾರಗಳ ಮೂಲಕ ಎಲ್ಲರಿಗೂ ಡಿಜಿಟಲ್ ಪ್ರವೇಶವನ್ನು ವಿಸ್ತರಿಸುವ ಮೂಲಕ ಡಿಜಿಟಲ್ ಬಳಕೆಯಿಂದ ದೂರವಿರುವ ಜನರ ಸಂಖ್ಯೆಯನ್ನು ಕಡಿಮೆ ಮಾಡಬೇಕಾಗಿದೆ ಎಂದ ಅವರು, ಕರೋನಾ ಸಾಂಕ್ರಾಮಿಕ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಭಾರತವು ವಿವಿಧ ರಂಗಗಳಲ್ಲಿ ಡಿಜಿಟಲ್ ಅನ್ನು ಒಂದು ಅವಕಾಶವಾಗಿ ಬಳಸಿಕೊಂಡಿತು ಎಂದು ಅವರು ಹೇಳಿದರು.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಡಿಜಿಟಲ್ ಇಂಡಿಯಾ ಅವಾರ್ಡ್ಸ್ 2020 ಅನ್ನು ಪ್ರದಾನಿಸಿದ ಕೋವಿಂದ್, ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸಿದ್ದರಿಂದ ಕೊರೋನಾ ಸಮಯದಲ್ಲಿ ಅದರ ಸಮರ್ಥ ಬಳಕೆ ಸಾಧ್ಯವಾಯಿತು ಎಂದು ಹೇಳಿದರು.
“ಈ ಸಾಂಕ್ರಾಮಿಕವು ಸಾಮಾಜಿಕ ಸಂಬಂಧಗಳು, ಆರ್ಥಿಕ ಚಟುವಟಿಕೆಗಳು, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಜೀವನದ ಇತರ ಹಲವು ಅಂಶಗಳ ದೃಷ್ಟಿಯಿಂದ ಜಗತ್ತನ್ನು ಬದಲಿಸಿದೆ ಎಂದ ಅವರು, ನ್ಯಾಯಾಂಗದಿಂದ ಹಿಡಿದು ಟೆಲಿ ಮೆಡಿಸಿನ್ವರೆಗೆ, ಹಲವಾರು ಕ್ಷೇತ್ರಗಳು ವರ್ಚುವಲ್ ಮೋಡ್ಗೆ ಬದಲಾದವು. ತಾಂತ್ರಿಕ ಪ್ರಗತಿ ದೊಡ್ಡ ಅಡ್ಡಿಗಳನ್ನು ದೊಡ್ಡ ಮಟ್ಟದಿಂದ ನಿವಾರಿಸಲು ಸಹಾಯ ಮಾಡಿದವು. ಡಿಜಿಟಲ್ ಸೇರ್ಪಡೆ ನಮ್ಮ ಜೀವನವನ್ನು ಅತ್ಯಂತ ಸರಳ ರೀತಿಯಲ್ಲಿ ಮುಟ್ಟಿದೆ” ಎಂದು ಕೋವಿಂದ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.