ನವದೆಹಲಿ: ಅಸ್ಸಾಂ ಮತ್ತು ಮಣಿಪುರದಲ್ಲಿ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ನ ಧುಬ್ರಿಯ ಸಂಸದ ಬದ್ರುದ್ದೀನ್ ಅಜ್ಮಲ್ ಮರ್ಕಾಜ್ ದಾರುಲ್ ಯತಮಾ ನಡೆಸುತ್ತಿರುವ 6 ಅನಾಥಾಶ್ರಮಗಳಿಗೆ ಭಯೋತ್ಪಾದನೆ ನಂಟು ಇರುವ ಶಂಕೆ ರಾಷ್ಟ್ರೀಯ ಮಕ್ಕಳ ಹಕ್ಕು ರಕ್ಷಣೆ ಆಯೋಗದ ವರದಿಯಿಂದ ಬಹಿರಂಗವಾಗಿದೆ.
ಸಂಸದ ನಡೆಸುತ್ತಿರುವ ಅನೇಕ ಅನಾಥಾಶ್ರಮಗಳ ಪೈಕಿ ಕನಿಷ್ಠ ಒಂದು ಅನಾಥಾಶ್ರಮಕ್ಕಾದರೂ ಐಹೆಚ್ಹೆಚ್ ಎಂಬ ಎನ್ಜಿಒ ನಿಂದ ಫಂಡ್ ಬರುತ್ತಿದೆ. ಈ ಎನ್ಜಿಒ ಮತ್ತು ಅಲ್ ಖೈದಾ ಉಗ್ರಗಾಮಿ ಸಂಘಟನೆಗೂ ನಂಟಿರುವುದು ಬಹಿರಂಗವಾಗಿದೆ. ಆ ಮೂಲಕ ಈಶಾನ್ಯ ರಾಜ್ಯಗಳ ಅನಾಥಾಶ್ರಮಗಳಿಗೂ ಉಗ್ರ ನಂಟಿರುವ ಸಾಧ್ಯತೆ ಇದೆ ಎಂದು ಎನ್ಸಿಪಿಸಿಆರ್ ಹೇಳಿದೆ.
ಇದಕ್ಕೆ ಪೂರಕವಾಗಿ ಎಂಬಂತೆ ಅನಾಥಾಶ್ರಮಗಳ ದಾಖಲೆಗಳಲ್ಲಿ ಉಲ್ಲೇಖವಾಗಿರುವ 1000 ಮಕ್ಕಳ ಪೈಕಿ 300 ಮಂದಿ ಮಕ್ಕಳು ತಪಾಸಣೆಯ ಸಂದರ್ಭದಲ್ಲಿ ಪತ್ತೆಯಾಗಿಲ್ಲ. ಇಂತಹ ಅನೇಕ ಅನುಮಾನಕಾರಿ ಸಂಗತಿಗಳನ್ನು ಈ ವರದಿಯಲ್ಲಿ ಬಹಿರಂಗ ಮಾಡಲಾಗಿದೆ. ಈ ಸಂಬಂಧ ಡಿಸೆಂಬರ್ 14-18 ರ ನಡುವೆ ನಡೆದಿರುವ 15 ಪುಟಗಳ ವರದಿಯನ್ನು ಸಹ ಎನ್ಸಿಪಿಸಿಆರ್ ತಿಳಿಸಿದೆ.
ಈ ಅನಾಥಾಶ್ರಮಗಳಲ್ಲಿ ಮೂರು ಅಕ್ರಮವಾಗಿ ನಡೆಯುತ್ತಿವೆ. ಯಾವುದೇ ನೋಂದಣಿಯನ್ನು ಮಾಡದೆ ಅನಾಥಾಶ್ರಮ ನಡೆಸಲಾಗಿತ್ತು. 6 ಅನಾಥಾಶ್ರಮಗಳಲ್ಲಿನ ಮಕ್ಕಳ ಪರಿಸ್ಥಿತಿ ಸಹ ಶೋಚನೀಯವಾಗಿತ್ತು. ಜೊತೆಗೆ ಮಕ್ಕಳಿಗೆ ದೈಹಿಕ ಹಿಂಸೆಯನ್ನು ಸಹ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಆರ್ಥಿಕ ವಿಚಾರವಷ್ಟೇ ಅಲ್ಲದೆ ಇನ್ನಿತರ ಅಕ್ರಮಗಳು ಸಹ ಅನಾಥಾಶ್ರಮಗಳಲ್ಲಿ ನಡೆಯುತ್ತಿರುವುದಾಗಿ ಈ ವರದಿಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.