ನವದೆಹಲಿ: ಚಿಪ್ಪಿಪ್ಪಾರ, ರಾಜಪಾಲಯಂ, ಮುಧೋಳ ಹೌಂಡ್, ಕೊಂಬೈ, ಕಣ್ಣಿ, ಬುಲ್ಲಿ ಕುಥಾದಂತಹ ದೇಸಿ ಶ್ವಾನ ತಳಿಗಳಿಗೆ ಹಠಾತ್ ಬೇಡಿಕೆ ಬಂದಿದ್ದು, ಇದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾರತೀಯ ಶ್ವಾನ ತಳಿಗಳನ್ನು ಸಾಕುವ ಮಹತ್ವದ ಬಗ್ಗೆ ಪ್ರಸ್ತಾಪಿಸಿದ್ದರು. ಅವರ ಮಾತಿನಂತೆ ಜನರು ಈಗ ದೇಶೀಯ ಶ್ವಾನಗಳಿಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ, ಜನರು ವಿದೇಶಿ ನಾಯಿಗಳಿಗಿಂತ ಭಾರತೀಯ ಪರಿಸ್ಥಿತಿಗಳಿಗೆ ಸೂಕ್ತವಾದ ನಾಯಿಗಳನ್ನು ಖರೀದಿಸಲು ಮತ್ತು ಸಾಕಲು ಪ್ರಾರಂಭಿಸಿದ್ದಾರೆ.
ಜನರು ಮಾತ್ರವಲ್ಲದೇ, ಮಿಲಿಟರಿ ಮತ್ತು ಇತರ ಭದ್ರತಾ ಪಡೆಗಳು ಸಹ ಭಾರತೀಯ ಶ್ವಾನ ತಳಿಗಳಿಗೆ ಕಾರ್ಯಾಚರಣೆಯ ಉದ್ದೇಶಗಳಿಗಾಗಿ ತರಬೇತಿ ನೀಡುತ್ತಿವೆ.
ತಮಿಳುನಾಡಿನ ಸ್ಥಳೀಯ ಚಿಪ್ಪಿಪ್ಪಾರ ದೇಸಿ ನಾಯಿ ತಳಿಗೆ ಹೆಚ್ಚು ಬೇಡಿಕೆಯಿದೆ. ಈ ನಾಯಿ ತನ್ನ ಮಾಲೀಕರ ಮೇಲಿನ ವಾತ್ಸಲ್ಯಕ್ಕೆ ಹೆಸರುವಾಸಿಯಾಗಿದೆ ಮತ್ತು ಈಗ ಇದರ ನಾಯಿಮರಿ 20,000 ರೂ.ಗೆ ಮಾರಾಟವಾಗುತ್ತಿದೆ. ಚಿಪ್ಪಿಪ್ಪಾರ ಶ್ವಾನದ ಕಣ್ಣುಗಳು 270 ಡಿಗ್ರಿಗಳ ದೃಷ್ಟಿಯನ್ನು ಹೊಂದಿವೆ ಎನ್ನಲಾಗಿದೆ. ಇದು ಬಲವಾದ ದೇಹವನ್ನು ಹೊಂದಿದೆ, ಇದು ಬೇಟೆಯಾಡಲು ಪರಿಣಾಮಕಾರಿಯಾಗಿದೆ ಮತ್ತು ಕಡಿಮೆ ಹೊಟ್ಟೆಯನ್ನು ಹೊಂದಿರುವುದರಿಂದ ಕನಿಷ್ಠ ಆಹಾರದ ಅಗತ್ಯವಿರುತ್ತದೆ.
ಬೇಡಿಕೆಯ ಹೆಚ್ಚಳದಿಂದಾಗಿ, ಜನರು ತಮ್ಮ ಆಯ್ಕೆಯ ದೇಸಿ ತಳಿಯನ್ನು ಪಡೆಯಲು ಪ್ರಸ್ತುತ 6 ತಿಂಗಳವರೆಗೆ ಕಾಯಬೇಕಾಗುತ್ತದೆ. ಈ ಬೇಡಿಕೆಯನ್ನು ಸೃಷ್ಟಿಸಿದ ಶ್ರೇಯಸ್ಸು ಪಿಎಂ ಮೋದಿಗೆ ಸಲ್ಲುತ್ತದೆ. ಅವರು ದೇಶೀಯ ನಾಯಿ ತಳಿಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರು ಮತ್ತು ಕೋವಿಡ್-19 ಸೃಷ್ಟಿಸಿದ ಅನಿಶ್ಚಿತತೆಯ ಸಮಯದಲ್ಲಿ ಶ್ವಾನ ಮಾರಾಟಗಾರರಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು ಸಹಾಯ ಮಾಡಿದರು ಎಂದರೆ ತಪ್ಪಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.