ನವದೆಹಲಿ: ವಾಲ್ ಸ್ಟ್ರೀಟ್ ಜರ್ನಲ್ನಲ್ಲಿ ಪ್ರಕಟವಾದ ಸುಳ್ಳು ಆರೋಪಗಳನ್ನು ಮುಂದಿಟ್ಟುಕೊಂಡು ಭಜರಂಗದಳವನ್ನು ದೂಷಿಸುವ ಪಿತೂರಿಯನ್ನು ರಾಹುಲ್ ಗಾಂಧಿಯವರು ಮಾಡಿದ್ದು, ಇದು ಅವರ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ವಿಶ್ವ ಹಿಂದೂ ಪರಿಷತ್ ಹೇಳಿದೆ.
ತುಕ್ಡೇ ತುಕ್ಡೇ ಗ್ಯಾಂಗ್, ಸಿಎಎ ವಿರೋಧಿ ಗ್ಯಾಂಗ್, ದೆಹಲಿ ದಂಗೆಕೋರರು, ರಾಷ್ಟ್ರ ವಿರೋಧಿ ನಿಲುವುಗಳನ್ನು ಪ್ರತಿಪಾದಿಸುತ್ತಿರುವವರು, ಚೀನಾ ಪರ ಮತ್ತು ಪಾಕಿಸ್ಥಾನ ಪರ ಇರುವವರು ಸೇರಿದಂತೆ ಹಲವಾರು ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ನಿಂತಿರುವ ರಾಹುಲ್ ಗಾಂಧಿಯವರಿಗೆ ಭಜರಂಗದಳದಂತಹ ರಾಷ್ಟ್ರೀಯತಾವಾದಿ ಸಂಘಟನೆ ಕಣ್ಣು ಕುಕ್ಕುತ್ತಿದೆ ಎಂದು ವಿಎಚ್ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂಡೆ ಹೇಳಿದ್ದಾರೆ.
ರಾಹುಲ್ ಅಮೇರಿಕನ್ ಪತ್ರಿಕೆಯೊಂದನ್ನು ನಂಬುತ್ತಾರೆ, ಆದರೆ ಭಾರತದ ರಾಷ್ಟ್ರೀಯವಾದಿ ಯುವ ಸಂಘಟನೆಯನ್ನು ನಂಬುದಿಲ್ಲ ಎಂದಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ನ ಸುಳ್ಳು ವರದಿಗಾಗಿ ಕ್ಷಮೆಯಾಚಿಸಬೇಕು. ಭಜರಂಗ ದಳವನ್ನು ಕೆಣಕುವ ನೆಪದಲ್ಲಿ ಜರ್ನಲ್ ಭಾರತವನ್ನು ಗುರಿಯಾಗಿಸಲು ಮತ್ತು ಅಪಖ್ಯಾತಿಗೊಳಪಡಿಸಲು ಪ್ರಯತ್ನಿಸಿದೆ, ಇದು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.
ವಿಕಿ-ಲೀಕ್ಸ್ನಿಂದ ಮಾಹಿತಿ ಪಡೆದ ಹಿಂದಿನ ಮಾಧ್ಯಮ ವರದಿಗಳು, ಸೋನಿಯಾ ಗಾಂಧಿ ಕೂಡ ಭಜರಂಗದಳವನ್ನು ನಿಷೇಧಿಸಲು ಸಾಕಷ್ಟು ಪಿತೂರಿಗಳನ್ನು ನಡೆಸುತ್ತಿದ್ದರು ಎಂಬುದನ್ನು ಸ್ಪಷ್ಟಪಡಿಸುತ್ತದೆ, ಆದರೆ ಅವರಿಗೆ ಈ ಕಾರ್ಯದಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಫೇಸ್ಬುಕ್ನಲ್ಲಿ ಭಜರಂಗದಳವನ್ನು ನಿರ್ಬಂಧಿಸಲು ಯಾವುದೇ ಕಾರಣವಿಲ್ಲ ಎಂದು ಫೇಸ್ ಬುಕ್ ಸ್ಪಷ್ಟಪಡಿಸಿದೆ. ಆದರೂ ಹಿಂದೂ ವಿರೋಧಿ ಮನೋಭಾವವನ್ನು ಇವರುಗಳು ಪ್ರತಿಬಿಂಬಿಸುತ್ತಿದ್ದಾರೆ. ಕೂಡಲೆ ರಾಹುಲ್ ಗಾಂಧಿ ಮತ್ತು ವಾಲ್ ಸ್ಟ್ರೀಟ್ ಜರ್ನಲ್ ಜಾಗತಿಕ ಜನಸಂಖ್ಯೆಯ 1/6 ನೇ ಭಾಗವನ್ನು ಹೊಂದಿರುವ ಭಜರಂಗದಳ ಮತ್ತು ಹಿಂದೂ ಸಮಾಜದ ಕ್ಷಮೆಯಾಚಿಸಬೇಕು ಎಂದು ಪರಂಡೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.