ನವದೆಹಲಿ: ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ, ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ಹಸುವಿನ ಸಗಣಿಗಳಿಂದ ತಯಾರಿಸಿದ ‘ವೇದಿಕ್ ಪೇಯಿಂಟ್’ ಅನ್ನು ಪರಿಚಯಿಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ನಿತಿನ್ ಗಡ್ಕರಿ ಅವರು, “ಗ್ರಾಮೀಣ ಆರ್ಥಿಕತೆಯನ್ನು ಹೆಚ್ಚಿಸಲು ಮತ್ತು ರೈತರಿಗೆ ಹೆಚ್ಚುವರಿ ಆದಾಯವನ್ನು ಗಳಿಸಲು, ನಾವು ಶೀಘ್ರದಲ್ಲೇ ಖಾದಿ ಮತ್ತು ಗ್ರಾಮ ಕೈಗಾರಿಕಾ ಆಯೋಗದ ಮೂಲಕ ಗೋವಿನ ಸಗಣಿಗಳಿಂದ ಮಾಡಿದ ‘ವೇದಿಕ್ ಪೇಯಿಂಟ್` ಅನ್ನು ಪ್ರಾರಂಭಿಸುತ್ತೇವೆ” ಎಂದಿದ್ದಾರೆ.
ಈ ಪೇಯಿಂಟ್ ಡಿಸ್ಟೆಂಪರ್ ಮತ್ತು ಎಮಲ್ಷನ್ ರೂಪಗಳಲ್ಲಿ ಬರುತ್ತದೆ ಮತ್ತು ಕೇವಲ ನಾಲ್ಕು ಗಂಟೆಗಳಲ್ಲಿ ಒಣಗುತ್ತದೆ ಎಂದು ಕೇಂದ್ರ ಸಚಿವರು ವಿವರಿಸಿದರು.
ಪರಿಸರ ಸ್ನೇಹಿ ಬಣ್ಣವು ವಿಷಕಾರಿಯಲ್ಲದ, ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಮತ್ತು ತೊಳೆಯಬಹುದಾದ ಗುಣಗಳನ್ನು ಹೊಂದಿರುತ್ತದೆ. ‘ವೇದಿಕ್ ಪೇಂಟ್’ ಜಾನುವಾರು ಕೃಷಿಕರಿಗೆ ವರ್ಷಕ್ಕೆ 55,000 ರೂ.ಆದಾಯ ತಂದು ಕೊಡಲಿದೆ ಎಂದಿದ್ದಾರೆ.
ग्रामीण इकोनॉमी को बल मिले और किसानों को अतिरिक्त आमदनी हो इसलिए Khadi and Village Industries Commission के माध्यम से हम जल्द ही गाय के गोबर से बना ‘वैदिक पेन्ट’ लॅान्च करने वाले हैं। @ChairmanKvic pic.twitter.com/zhQpa3Es5i
— Nitin Gadkari (@nitin_gadkari) December 17, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.