ನವದೆಹಲಿ: ಛತ್ತೀಸ್ಗಢದ ಬುಡಕಟ್ಟು ಕುಟುಂಬಗಳಿಗೆ ಕೃಷಿ ಕಾರ್ಯಕ್ರಮಗಳು ಸೇರಿದಂತೆ ಹಲವಾರು ಅಭಿವೃದ್ಧಿ ಉಪಕ್ರಮಗಳಿಗೆ ಬೆಂಬಲವನ್ನು ನೀಡುವ ಸಲುವಾಗಿ ವಿಶ್ವಬ್ಯಾಂಕ್ ಭಾರತದಲ್ಲಿ $800 ದಶಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ನಾಲ್ಕು ಯೋಜನೆಗಳಿಗೆ ಅನುದಾನ ನೀಡಲಿದೆ.
ನಾಗಾಲ್ಯಾಂಡ್ನಲ್ಲಿ ಗುಣಮಟ್ಟದ ಶಿಕ್ಷಣವನ್ನು ಹೆಚ್ಚಿಸುವುದು ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಅಣೆಕಟ್ಟುಗಳ ಸುರಕ್ಷತೆ ಮತ್ತು ಅವುಗಳ ಕಾರ್ಯಕ್ಷಮತೆ ಸುಧಾರಣೆ ವಿಶ್ವಬ್ಯಾಂಕ್ನಿಂದ ಬೆಂಬಲಿತವಾಗಿರುವ ನಾಲ್ಕು ಯೋಜನೆಗಳಲ್ಲಿ ಸೇರಿದೆ.
“ನಾಲ್ಕು ಯೋಜನೆಗಳು ಸುಸ್ಥಿರ ಮತ್ತು ದೃಢ ಆರ್ಥಿಕತೆಯನ್ನು ಸೃಷ್ಟಿಸುವ ಮೂಲಕ ಅತ್ಯುತ್ತಮ ಭಾರತವನ್ನು ನಿರ್ಮಾಣ ಮಾಡುವ ಭಾರತದ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ಅಭಿವೃದ್ಧಿ ಕಾರ್ಯಗಳು ಇಂದು ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿವೆ, ಯಾಕೆಂದರೆ ಬಡ ಮತ್ತು ದುರ್ಬಲ ಕುಟುಂಬಗಳ ಮೇಲೆ ಸಾಂಕ್ರಾಮಿಕ ರೋಗವು ಬೀರಿದ ದುಷ್ಪರಿಣಾಮವನ್ನು ಹಿಮ್ಮೆಟ್ಟಿಸಲು ಇದು ಅನಿವಾರ್ಯವಾಗಿದೆ ”ಎಂದು ವಿಶ್ವಬ್ಯಾಂಕ್ ಇಂಡಿಯಾದ ನಿರ್ದೇಶಕ ಜುನೈದ್ ಅಹ್ಮದ್ ಹೇಳಿದ್ದಾರೆ.
“ಈ ಯೋಜನೆಗಳು ಅಂತಹ ಅನೇಕ ಕುಟುಂಬಗಳಿಗೆ ಉತ್ತಮ ಆದಾಯದ ಅವಕಾಶಗಳು, ಶಿಕ್ಷಣ, ನೀರು ಸರಬರಾಜು ಮತ್ತು ಸರ್ಕಾರದ ವಿಸ್ತೃತ ಸಾಮಾಜಿಕ ಸಂರಕ್ಷಣಾ ಯೋಜನೆಗಳಿಂದ ಲಾಭ ಪಡೆಯಲು ಸಹಾಯ ಮಾಡುತ್ತದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.