ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಭಾರತದಿಂದ ಕಾಲ್ಕಿತ್ತಿರುವ ಇಸ್ಲಾಮಿಕ್ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ಗೆ ಸಂಬಂಧಿಸಿದ ಮಲೇಷ್ಯಾ ಮೂಲದ ರೊಹಿಂಗ್ಯಾ ಭಯೋತ್ಪಾದನಾ ಸಂಘಟನೆಯು ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರಾಯೋಜಿಸಲು ನಡೆಸಿದ ಹಣಕಾಸು ವರ್ಗಾವಣೆಗೆ ಮಾಹಿತಿಯನ್ನು ಕಲೆ ಹಾಕಿ ಅದನ್ನು ತಡೆಗಟ್ಟುವಲ್ಲಿ ಭಾರತೀಯ ಗುಪ್ತಚರ ಸಂಸ್ಥೆ ಯಶಸ್ವಿಯಾಗಿದೆ.
ನಾಯ್ಕ್ ಮತ್ತು ರೋಹಿಂಗ್ಯಾ ನಾಯಕ ಮೊಹಮ್ಮದ್ ನಸೀರ್ಗೆ ಸಂಬಂಧಿಸಿದಂತೆ 2 ಲಕ್ಷ ಡಾಲರ್ ರೂ.ಗಳ ಅನುಮಾನಾಸ್ಪದ ವಹಿವಾಟಿನ ಎಳೆಯನ್ನು ಗುಪ್ತಚರ ಸಂಸ್ಥೆಗಳು ಪತ್ತೆ ಮಾಡಿವೆ.
ಚೆನ್ನೈ ಮೂಲದ ಶಂಕಿತ ಹವಾಲಾ ವ್ಯಾಪಾರಿ, ಈ ಮೊತ್ತದ ಒಂದು ಭಾಗವನ್ನು ಪಡೆದಿದ್ದಾನೆ ಎಂದು ದಾಖಲೆಗಳು ಹೇಳುತ್ತಿವೆ.
ಗುಪ್ತಚರ ಪ್ರಕಾರ, ಮಯನ್ಮಾರಿನಲ್ಲಿ ತರಬೇತಿ ಪಡೆದಿರುವ ಭಯೋತ್ಪಾದಕ ಸಂಘಟನೆಯ ಮಹಿಳಾ ನೇತೃತ್ವದ ಗುಂಪು ಮುಂದಿನ ವಾರಗಳಲ್ಲಿ ಭಾರತೀಯ ನಗರದಲ್ಲಿ ದಾಳಿ ನಡೆಸಲು ಪ್ರಯತ್ನಿಸುವ ಸಾಧ್ಯತೆಯಿದೆ. ಹೀಗಾಗಿ ಕಣ್ಗಾವಲು ಹೆಚ್ಚಿಸಲು ದೆಹಲಿ, ಹರಿಯಾಣ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದ ಭದ್ರತಾ ಸಂಸ್ಥೆಗಳಿಗೆ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿದೆ.
ಅಯೋಧ್ಯೆ, ಬೋಧಗಯಾ, ಪಂಜಾಬ್ ಮತ್ತು ಶ್ರೀನಗರ ಈ ಗುಂಪಿನ ಗುರಿಯಾಗಿರುವ ಸಾಧ್ಯತೆ ಇದೆ.
ಈ ಗುಂಪು ಡಿಸೆಂಬರ್ ಮಧ್ಯದಲ್ಲಿ ಅಥವಾ ಡಿಸೆಂಬರ್ ಅಂತ್ಯದಲ್ಲಿ ಬಾಂಗ್ಲಾದೇಶದ ಮೂಲಕ ಭಾರತಕ್ಕೆ ನುಸುಳಲು ಯೋಜನೆ ರೂಪಿಸಿದೆ ಎಂದು ಗುಪ್ತಚರ ಮಾಹಿತಿ ಸೂಚಿಸುತ್ತದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಈ ಗುಂಪುಗಳಿಗೆ ಸರಕು ರೂಪದಲ್ಲಿ ಬೆಂಬಲವನ್ನು ನೀಡಬಹುದು ಎಂದು ಗುಪ್ತಚರ ಸಂಸ್ಥೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.