ಹೈದರಾಬಾದ್: ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿಶನ್ ರೆಡ್ಡಿ ಅವರು ಸಿಆರ್ಪಿಎಫ್ನ ದಿವ್ಯಾಂಗ ಸಬಲೀಕರಣ ರಾಷ್ಟ್ರೀಯ ಕೇಂದ್ರ (ಎನ್ಸಿಡಿಇ)ವನ್ನು ತೆಲಂಗಾಣದ ರಂಗರೆಡ್ಡಿಯ ಜಿಸಿಯಲ್ಲಿ ಇಂದು ಉದ್ಘಾಟಿಸಿದರು. ವಿಶ್ವ ದರ್ಜೆಯ ಸೌಲಭ್ಯಗಳನ್ನು ಹೊಂದಿರುವ ಎನ್ಸಿಡಿಇ ದಿವ್ಯಾಂಗ ಯೋಧರಿಗೆ ಕ್ರೀಡೆಯಲ್ಲಿ ಕೌಶಲ್ಯವನ್ನು ನೀಡುತ್ತದೆ ಮತ್ತು ಸೈಬರ್ ತಂತ್ರಜ್ಞಾನದಲ್ಲಿ ತರಬೇತಿ ನೀಡುತ್ತದೆ.
ದೇಶ ಸೇವೆಯ ಕರ್ತವ್ಯವನ್ನು ಪಾಲನೆ ಮಾಡುತ್ತಾ ಕೈ, ಕಾಲು ಅಥವಾ ದೇಹದ ಭಾಗಗಳಿಗೆ ತೀವ್ರ ಸ್ವರೂಪದ ಹಾನಿ ಮಾಡಿಕೊಂಡು ದಿವ್ಯಾಂಗರಾದ ಅನೇಕ ಯೋಧರು ಇದ್ದಾರೆ. ಈ ಯೋಧರನ್ನು ಸಬಲೀಕರಣ ಮಾಡುವ ಉದ್ದೇಶವನ್ನು ಈ ಕೇಂದ್ರ ಹೊಂದಿದೆ.
ಹೈದರಾಬಾದಿನ ಸಿಆರ್ಪಿಎಫ್ ಗ್ರೂಪ್ ಸೆಂಟರ್ನಲ್ಲಿಕೇಂದ್ರವನ್ನು ಸಿಆರ್ಪಿಎಫ್ ಸ್ಥಾಪನೆ ಮಾಡಿದೆ.
ಎನ್ಸಿಡಿಇ ಭಾಗವಾಗಿ, ದಿವ್ಯಾಂಗರಾದ ಯೋಧರು ತರಬೇತಿಯನ್ನು ಪಡೆಯಲಿದ್ದಾರೆ, ಅವರಿಗೆ ಪ್ರೇರಣೆ ನೀಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತದೆ. ಅವರನ್ನು ಸಬಲೀಕರಣಗೊಳಿಸಿ ಅವರಿಗೆ ಉತ್ತಮ ಭವಿಷ್ಯವನ್ನು ರೂಪಿಸಿ ಕೊಡುವ ಕಾರ್ಯವನ್ನು ಮಾಡಲಾಗುತ್ತದೆ.
ಕ್ರೀಡೆ ಮತ್ತು ಕಂಪ್ಯೂಟರ್ ಜ್ಞಾನವನ್ನೂ ಅವರಿಗೆ ನೀಡಲಾಗುತ್ತದೆ.
Minister of State for Home affairs Shri @kishanreddybjp inaugurated CRPF’s National Centre for Divyang Empowerment (NCDE) at GC, Rangareddy, Telangana. Equipped with world class facilities, NCDE will skill Divyang Warriors in sports and then re-skill them in Cyber Technology. pic.twitter.com/sWAhKzYliw
— 🇮🇳CRPF🇮🇳 (@crpfindia) December 10, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.