ಬೆಂಗಳೂರು: ಕೇಂದ್ರ ರೈಲ್ವೆ ಇಲಾಖೆ ಕೊರೋನಾ ಲಾಕ್ಡೌನ್ ಸಂದರ್ಭದಲ್ಲಿ ಮೈಸೂರು – ಬೆಂಗಳೂರು ನಡುವಣ ರೈಲ್ವೆ ಹಳಿಗಳ ದುರಸ್ಥಿ ಕಾರ್ಯವನ್ನು ಸಂಪೂರ್ಣಗೊಳಿಸಿದೆ.
ಈ ಕಾಮಗಾರಿಯ ಪರಿಪೂರ್ಣತೆಯನ್ನು ಪರೀಕ್ಷೆ ಮಾಡಲು ರೈಲ್ವೆ ಇಲಾಖೆ ಗಾಜಿನ ಲೋಟದಲ್ಲಿ ನೀರಿಟ್ಟು ಸಾಧಕ, ಭಾದಕಗಳನ್ನು, ಸಂದೇಹಗಳನ್ನು ಸಹ ನಿವಾರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ರೈಲು ಹಳಿಗಳ ಮೇಲೆ ಎಷ್ಟೇ ವೇಗವಾಗಿ ಹೋದರು ಗಾಜಿನ ಲೋಟದಲ್ಲಿ ರೈಲಿನೊಳಗೆ ಇರಿಸಿದ ನೀರು ಒಂದು ಹನಿಯೂ ಹೊರಚೆಲ್ಲಿಲ್ಲ. ಆ ಮೂಲಕ ಅತ್ಯಂತ ಪರಿಪೂರ್ಣವಾಗಿ ಈ ಕಾಮಗಾರಿಯನ್ನು ಯಾವುದೇ ಲೋಪವಾಗದಂತೆ ರೈಲ್ವೆ ಇಲಾಖೆ ಮಾಡಿದೆ.
ಈ ಬಗ್ಗೆ ರೈಲ್ವೆ ಸಚಿವ ಪೀಯೂಷ್ ಗೋಯಲ್ ಅವರು ಈ ಪರೀಕ್ಷೆಯ ವಿಡಿಯೋ ಸಹಿತ ಟ್ವೀಟ್ ಮಾಡಿದ್ದು, ಕಾಮಗಾರಿ ಪೂರ್ಣಗೊಂಡ ಹಳಿಗಳಲ್ಲಿ ರೈಲು ಅದೆಷ್ಟೇ ವೇಗವಾಗಿ ಚಲಿಸಿದರೂ ರೈಲಿನ ಮೇಲಿಟ್ಟ ಗಾಜಿನ ಲೋಟಗಳಿಂದ ಒಂದು ಹನಿ ನೀರೂ ಹೊರ ಚೆಲ್ಲಿಲ್ಲ. ಹಾಗಾದರೆ ಈಹಾದಿಯಲ್ಲಿ ಪ್ರಯಾಣ ಅದೆಷ್ಟು ಸುಗಮವಿರಬಹುದು. ನೀವೇ ಊಹಿಸಿ ಎಂದು ಬರೆದುಕೊಂಡಿದ್ದಾರೆ.
The results of intensive track 🛤️ maintenance carried out between Bengaluru & Mysuru in Karanataka are there for everyone to see.
The journey has become so smooth that not even a single drop of water 💧 spilled out of the glass while the train was traveling at high speed. pic.twitter.com/r7aFp55gSA
— Piyush Goyal (@PiyushGoyal) October 30, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.