ಗಾಂಧೀನಗರ: ಗುಜರಾತ್ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ʼಆರೋಗ್ಯ ವನʼ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಯೋಗ, ಆಯುರ್ವೇದ ಮತ್ತು ಧ್ಯಾನದ ಬಗ್ಗೆ ಜಾಗೃತಿ ಮೂಡಿಸಲು ಕೆವಾಡಿಯಾದಲ್ಲಿ 17 ಎಕರೆ ಭೂಮಿಯಲ್ಲಿ ಆರೋಗ್ಯ ವನ ಸ್ಥಾಪಿಸಲಾಗಿದೆ. ಆರೋಗ್ಯ ವನದಲ್ಲಿ 380 ಜಾತಿಯ ಸಸ್ಯಗಳು ಮತ್ತು ಮರಗಳು ಇದ್ದು, ಇವುಗಳು ಸಮೃದ್ಧ ಔಷಧೀಯ ಮೌಲ್ಯಗಳನ್ನು ಹೊಂದಿವೆ. ಕೇರಳದ ನೈಸರ್ಗಿಕ ಚಿಕಿತ್ಸೆ ಸೇರಿದಂತೆ, ಕರಕುಶಲ ಅಂಗಡಿಗಳು ಮತ್ತು ಕೆಫೆಟೇರಿಯಾಗಳು ಸಹ ಈ ಆರೋಗ್ಯ ವನದಲ್ಲಿ ಇವೆ.
ಆರೋಗ್ಯ ವನ ವನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು, ಡಿಜಿಟಲ್ ಮಾಹಿತಿ ಕೇಂದ್ರ ಮತ್ತು ಒಳಾಂಗಣ ಸಸ್ಯ ಉದ್ಯಾನಕ್ಕೆ ಭೇಟಿ ನೀಡಿದರು. ಗಾಲ್ಫ್ ಕಾರ್ಟ್ ನಲ್ಲಿ ಸುತ್ತಾಡಿದರು.
ಕೆವಾಡಿಯಾ ಬಳಿಯಿರುವ ಏಕತಾ ಪ್ರತಿಮೆಯ ಸಮೀಪ ಪ್ರಧಾನಿ ಸುಮಾರು 17 ವಿವಿಧ ಯೋಜನೆಗಳನ್ನು ಉದ್ಘಾಟಿಸಲು ಮತ್ತು ನಾಲ್ಕು ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ನಾಳೆ ಸರ್ದಾರ್ ವಲ್ಲಭಭಾಯ್ ಅವರ 145 ನೇ ಜನ್ಮ ವಾರ್ಷಿಕೋತ್ಸವದಂದು ವಿಶೇಷ ಗೌರವ ಸಲ್ಲಿಸಲಿದ್ದಾರೆ. ರಾಷ್ಟ್ರೀಯ ಏಕತಾ ದಿನದ ಸಂದರ್ಭದಲ್ಲಿ ಏಕತಾ ಪ್ರತಿಮೆ ಬಳಿ ನಡೆಯಲಿರುವ ಏಕ್ತಾ ಪೆರೇಡ್ನಲ್ಲಿ ಅವರು ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.