ಅಹ್ಮದಾಬಾದ್: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತಿನ ಮಾಜಿ ಮುಖ್ಯಮಂತ್ರಿ ಕೇಶೂಭಾಯ್ ಪಟೇಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
“ನಮ್ಮ ಪ್ರೀತಿಯ ಮತ್ತು ಗೌರವಾನ್ವಿತ ಕೇಶೂಭಾಯ್ ಪಟೇಲ್ ಅವರ ನಿಧನವಾಗಿದೆ. ತೀವ್ರ ನೋವು ಮತ್ತು ದುಃಖಕರ ಸಂಗತಿ. ಅವರು ಸಮಾಜದ ಎಲ್ಲ ವರ್ಗಗಳ ಕಾಳಜಿ ಹೊಂದಿದ್ದ ಮೇರು ನಾಯಕರಾಗಿದ್ದರು. ತಮ್ಮ ಬದುಕನ್ನು ಗುಜರಾತಿನ ಪ್ರಗತಿಗೆ ಮತ್ತು ಪ್ರತಿಯೊಬ್ಬ ಗುಜರಾತಿಯರ ಸಬಲೀಕರಣಕ್ಕೆ ಮುಡಿಪಾಗಿಟ್ಟಿದ್ದರು” ಎಂದಿದ್ದಾರೆ.
ಕೇಶೂಭಾಯ್ ಗುಜರಾತಿನ ಉದ್ದಗಲ ಸಂಚರಿಸಿ ಜನಸಂಘ ಮತ್ತು ಬಿಜೆಪಿಯನ್ನು ಬಲಪಡಿಸಿದ್ದರು. ತುರ್ತುಪರಿಸ್ಥಿತಿಯನ್ನು ಅವರು ಖಂಡಿಸಿದ್ದರು. ರೈತರ ಕಲ್ಯಾಣ ಕುರಿತ ವಿಚಾರ ಅವರ ಹೃದಯ ಸ್ಪಂದಿಸುತ್ತಿತ್ತು. ಶಾಸಕರಾಗಿ, ಸಂಸದರಾಗಿ, ಸಚಿವರಾಗಿ ಅಥವಾ ಮುಖ್ಯಮಂತ್ರಿಯಾಗಿ ಅವರು ಹಲವು ರೈತ ಸ್ನೇಹಿ ಕ್ರಮಗಳು ಅನುಮೋದನೆಯಾಗುವಂತೆ ಮಾಡಿದ್ದರು ಎಂದಿದ್ದಾರೆ.
ಕೇಶುಭಾಯ್ ಅವರು ನಾನೂ ಸೇರಿದಂತೆ ಅನೇಕ ಕಿರಿಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿ, ಬೆಳೆಸಿದ್ದರು. ಪ್ರತಿಯೊಬ್ಬರೂ ಅವರ ಸ್ನೇಹಪರ ಸ್ವಭಾವವನ್ನು ಇಷ್ಟಪಡುತ್ತಿದ್ದರು. ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ. ನಾವೆಲ್ಲರೂ ಇಂದು ಶೋಕದಲ್ಲಿ ಮುಳುಗಿದ್ದೇವೆ. ನನ್ನ ಸಂತಾಪ ಅವರ ಕುಟುಂಬ ಮತ್ತು ಹಿತೈಷಿಗಳ ಜೊತೆಗಿದೆ. ಅವರ ಪುತ್ರ ಭರತ್ ಅವರೊಂದಿಗೆ ಮಾತನಾಡಿ ಸಂತಾಪ ವ್ಯಕ್ತಪಡಿಸಿದ್ದೇನೆ.. ಓಂ ಶಾಂತಿ” ಎಂದು ಪ್ರಧಾನಮಂತ್ರಿಯವರು ಸರಣಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
हम सभी के प्रिय, श्रद्धेय केशुभाई पटेल जी के निधन से मैं दुखी हूं, स्तब्ध हूं। https://t.co/kWCDdWmyOR
— Narendra Modi (@narendramodi) October 29, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.