News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಯ್ಕಾಟ್ ಲಕ್ಷ್ಮಿ ಬಾಂಬ್

ಬಾಯ್ಕಾಟ್ ಲಕ್ಷ್ಮಿ ಬಾಂಬ್…ಏನಿದು ಅಂತೀರಾ? ಬಾಲಿವುಡ್ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಅವರ ಹೊಸ ಚಿತ್ರ. ಇದೇ ನವೆಂಬರ್ ತಿಂಗಳ 9 ರಂದು ಬಿಡುಗಡೆ ಆಗುತ್ತಿದೆ. ಇದು ಕಾಂಚನಾ ಎಂಬ ತಮಿಳು ಚಿತ್ರದ ರಿಮೇಕ್ ಚಿತ್ರ. ಇದರಲ್ಲಿ ತಪ್ಪೇನೂ ಇಲ್ಲ, ಅದರಲ್ಲೂ ಅಕ್ಷಯ್ ಕುಮಾರ್ ಅಂತೂ ದೇಶ ಅಂತ ಬಂದಾಗ ಸದಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ. ಅವರ ಚಿತ್ರ ಅಂದ ಮೇಲೆ ನಾವು ಪ್ರೋತ್ಸಾಹಿಸಬೇಕು ಅಲ್ಲವೇ? ಅನ್ನುವವರಿಗೆ ಮೂಲ ಚಿತ್ರದ ಕುರಿತು ಕಿರು ಮಾಹಿತಿ.

1. ಚಿತ್ರದಲ್ಲಿ ಅಕ್ಷಯ್ ಕುಮಾರ್ ಹೆಸರು ಆಸಿಫ್ ಮತ್ತು ನಾಯಕಿ ಹೆಸರು ಪ್ರಿಯಾ. ಮೂಲ ಚಿತ್ರದ ನಾಯಕನ ಹೆಸರು ರಾಘವ್. ಚಿತ್ರದಲ್ಲಿ ನಾಯಕನ ಹೆಸರು ಬದಲಿಸುವ ಅವಶ್ಯಕತೆ ಆದರೂ ಏನಿತ್ತು?

2. ದೀಪಾವಳಿ ಲಕ್ಷ್ಮಿಯನ್ನು ಪೂಜಿಸುವ ಸಂಪ್ರದಾಯ ಇದೆ. ಅಂತಹ ಸಂದರ್ಭದಲ್ಲಿ ಲಕ್ಷ್ಮಿ ಬಾಂಬ್ ಅಂತ ಹೇಳಿ ಹೀಗಳೆಯುವ ಅವಶ್ಯಕತೆ ಆದರೂ ಏನಿತ್ತು?

3. ಎಲ್ಲದಕ್ಕೂ ಉತ್ತರ ಚಿತ್ರದ ನಿರ್ಮಾತೃ ಶಬೀನಾ ಖಾನ್. ಇವಳು ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪಿನ ಸದಸ್ಯೆ. ನಿಮಗೆ ಬಹುಶಃ ಅರ್ಥ ಆಗಿರಬಹುದು.

4. ಬಾಲಿವುಡ್ ಈಗ ಬದಲಾಗಿದೆ. ಅವರೆಲ್ಲರಿಗೂ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಉಳಿವಿನ ಪ್ರಶ್ನೆ ಎದುರಾಗಿದ್ದು, ಒಗ್ಗಟ್ಟು ಕಾಣಿಸಿದೆ. ಅದರಂತೆ ಈಗ ಅಮೀರ್ ಖಾನ್ ಎಂಬ ನಟ ಈಗ ಲಕ್ಷ್ಮಿ ಬಾಂಬ್ ಚಿತ್ರದ ಪ್ರಚಾರಕ್ಕಾಗಿ ಮುಂದೆ ಬಂದಿದ್ದಾನೆ. ಈತನ ಕುರಿತು ಹೆಚ್ಚೇನೂ ಹೇಳಲಾರೆ. ಇತ್ತೀಚೆಗೆ ಟರ್ಕಿಗೆ ಭೇಟಿ ನೀಡಿ ಯಥಾ ಪ್ರಕಾರ ಭಾರತವನ್ನು ಹಳಿದು ಮುಂದಿನ ಹುನ್ನಾರಗಳ ಕುರಿತು ಚರ್ಚೆ ಮಾಡಿ ಬಂದಂತಿದೆ.  ಅಕ್ಷಯ್ ಕುಮಾರ್ ಬಿಡಿ ಯಾವತ್ತೂ ಯಾವ ನಟನನ್ನೂ ಹೊಗಳದ ಅಸಹಿಷ್ಣು ಅಮೀರ್ ಖಾನ್ ಇದ್ದಕ್ಕಿದ್ದಂತೆ ಲಕ್ಷ್ಮಿ ಬಾಂಬ್ ಚಿತ್ರದ ಟ್ರೇಲರ್ ನೋಡಿ ಹೊಗಳಿದ್ದಾನೆ. ಸೂಚ್ಯವಾಗಿ ಚಿತ್ರದ ಬೆಂಬಲದಲ್ಲಿ ತಾನಿದ್ದೇನೆ, ತನ್ನ ಕಡೆಯವರು ಈ ಸಿನಿಮಾದ ಬೆಂಬಲಕ್ಕೆ ನಿಂತು ಬಿಡಿ ಎಂಬಂತಿದೆ.‌

ಅಲ್ಲಿಗೆ ಬಾಲಿವುಡ್ ಒಂದು ಹಂತಕ್ಕೆ ಬಂದು ನಿಂತಿದೆ.‌ ಈಗ ಅವರಿಗೆ ಬುದ್ಧಿ ಕಲಿಸುವ ಅವಶ್ಯಕತೆ ತೀರಾ ಕಂಡು ಬರುತ್ತಿದೆ. ಇದರ ಬಗ್ಗೆ ಹೆಚ್ಚು ಹೇಳಬೇಕು ಅನ್ನಿಸುತ್ತಿಲ್ಲ. ತೀರಾ ಸರಳವಾಗಿ ಕಣ್ಣು ಮುಂದೆ ಬಾಲಿವುಡ್ ತನ್ನತನ ತೋರಿಸುತ್ತಿದೆ. 1960 ರಿಂದ ಹಿಡಿದು ಇಲ್ಲಿಯ ತನಕ ಶೇಕಡಾ 60%ಕ್ಕೂ ಹೆಚ್ಚು ಅವರು ತುಚ್ಛವಾಗಿ ತೋರಿಸಿದ್ದು ಸನಾತನ ಧರ್ಮವನ್ನು, ದೇವರುಗಳನ್ನು ಮತ್ತು ಆಚರಣೆಗಳನ್ನು. ಅಲ್ಲಿಯ ನಟ ನಟಿಯರು ನಮ್ಮ ಚಿತ್ರಗಳನ್ನು ನೋಡಿ ಎನ್ನುತ್ತಾ ಜನರ ಮುಂದೆ ಬರುತ್ತಾರೆ, ಆದರೆ ನಮಗೆ ಈ ದೇಶ ಸುರಕ್ಷಿತ ಆಗಿಲ್ಲ ಎಂದು ಮತ್ತೊಂದು ಕಡೆ ಹೇಳುತ್ತಾರೆ, ತಮ್ಮ ಮಕ್ಕಳಿಗೆ ದಂಗೆಕೋರರ ಹೆಸರು ಇಡುವ ತನಕ ಮುಂದುವರೆದಿದ್ದಾರೆ. ಆಯ್ಕೆ ನಿಮ್ಮ ಮುಂದಿದೆ.

✍️ ಸಚಿನ್‌ ಸಾಗರ್

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top