ಜೈಪುರ: ರಾಜಸ್ಥಾನದ ಅಲ್ವರ್ ಜಿಲ್ಲೆಯಲ್ಲಿ ದಲಿತ ವ್ಯಕ್ತಿಯ ಬಲವಂತದ ಮತಾಂತರದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೊಹಮ್ಮದ್ ಅನಸ್ ಆಗಿ ಬದಲಾಗಿರುವ ಮೆಮ್ ಚಂದ್ ಈಗ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಇವರನ್ನು ಅಪರಿಚಿತ ವ್ಯಕ್ತಿಗಳು ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ. ಬಳಿಕ ಇವರ ಪತ್ನಿಯನ್ನು ಕೂಡ ಬಲವಂತದಿಂದ ಮತಾಂತರ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.
ಇದೀಗ ಮೆಮ್ ಚಂದ್ ಅವರು ಅಲ್ವರ್ ನ್ಯಾಯಾಲಯದ ಮೊರೆ ಹೋಗಿ, ತಾನು ಮರಳಿ ಹಿಂದೂ ಧರ್ಮಕ್ಕೆ ಬರಲು ಸಹಾಯ ಮಾಡುವಂತೆ ಕೋರಿದ್ದಾರೆ.
ಅಲ್ವರ್ ಜಿಲ್ಲೆಯ ಬರೋಡ ಮಿಯ ನಿವಾಸಿಯಾಗಿರುವ ಮೆಮ್ ಚಂದ್ ಅವರನ್ನು ಮತಾಂತರ ಮಾಡಿದ ಬಳಿಕ ಅವರಿಗೆ ಮೊಹಮ್ಮದ್ ಅನಸ್ ಎಂಬ ಹೊಸ ಹೆಸರನ್ನು ನೀಡಲಾಗಿತ್ತು. ಬಳಿಕ ಇವರಿಗೆ ಹರಿಯಾಣದ ಫಿರೋಜಪುರ ಜಿರ್ಕಾದಲಿ ಭೂಮಿಯನ್ನು ಕೂಡ ನೀಡಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಜಮಾತ್ ಕಾರ್ಯಕ್ರಮಕ್ಕೆ ಕೂಡ ಇವರನ್ನು ಕರೆದೊಯ್ಯಲಾಗಿತ್ತು. ಇವರ ಪತ್ನಿಯನ್ನು ಕೂಡ ಬಲವಂತದಿಂದ ಮತಾಂತರ ಮಾಡಿಸಲಾಯಿತು. ದುರುದ್ದೇಶದ ಕಾರಣದಿಂದಾಗಿ ನಮ್ಮನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ಮೆಮ್ ಚಂದ್ ಆರೋಪಿಸಿದ್ದಾರೆ.
ತನ್ನ ಮತಾಂತರದ ಹಿಂದೆ ಇರುವ ವ್ಯಕ್ತಿಗಳನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಇವರು ನ್ಯಾಯಾಲಯಕ್ಕೆ ಕೋರಿದ್ದಾರೆ. ತಮ್ಮ ಅರ್ಜಿಯಲ್ಲಿ ಅವರು 15 ಜನರ ಹೆಸರನ್ನು ಉಲ್ಲೇಖಿಸಿದ್ದಾರೆ.
#Breaking | Alleged case of luring a Dalit to convert to Islam comes to light from Rajasthan’s Alwar.
Man claims he was given new name and address after conversion, later forced to attend Jamaat in J&K.
Listen in. pic.twitter.com/Pnt5fuUDdw
— TIMES NOW (@TimesNow) October 28, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.