ಲಕ್ನೋ: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಕೆಲವೇ ವರ್ಷಗಳಲ್ಲಿ ನಗರ ಪ್ರಸಿದ್ಧ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ. ಈ ಹಿನ್ನೆಲೆಯಲ್ಲಿ ಹೇಳಿಕೆಯನ್ನು ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಅಯೋಧ್ಯೆ ನಗರಿಯನ್ನು ಪರಿಸರಸ್ನೇಹಿಯಾಗಿ ಅಭಿವೃದ್ಧಿಪಡಿಸಲಾಗುತ್ತದೆ ಎಂದಿದ್ದಾರೆ.
ಪರಿಸರವನ್ನು ಮಾಲಿನ್ಯದಿಂದ ಮುಕ್ತವಾಗಿರಿಸುವುದನ್ನು ಖಚಿತಪಡಿಸಿಕೊಳ್ಳಲು ಎಲೆಕ್ಟ್ರಾನಿಕ್ ವಾಹನಗಳು ಮಾತ್ರ ನಗರದ ಪ್ರವೇಶ ಸ್ಥಳದಿಂದ ಭವ್ಯ ರಾಮ ಮಂದಿರಕ್ಕೆ ಪ್ರಯಾಣಿಸಲಿವೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಎಲ್ಲಾ ಮುಖ್ಯ ಮಾರ್ಗಗಳಲ್ಲಿ ಪಾರ್ಕಿಂಗ್ ಮತ್ತು ಬಹು ಆಯಾಮದ ಪಾರ್ಕಿಂಗ್ ಪ್ರದೇಶಗಳಿರಲಿವೆ. ಪ್ರವಾಸಿಗರಿಗೆ ರೋಪ್ವೇ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎನ್ನಲಾಗಿದೆ.
ಪವಿತ್ರ ನಗರವನ್ನು ಸೌರ ನಗರವಾಗಿ ಅಭಿವೃದ್ಧಿಪಡಿಸುವುದಾಗಿ ಆದಿತ್ಯನಾಥ್ ಮೊದಲೇ ಘೋಷಿಸಿದ್ದರು. ಈಗ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯು ನೋಡಲ್ ಪ್ರಾಧಿಕಾರವಾಗಿ, ಲೋಕೋಪಯೋಗಿ ಇಲಾಖೆ, ಪ್ರವಾಸಿ ಇಲಾಖೆ, ಮತ್ತು ಸಂಸ್ಕೃತಿ ಮತ್ತು ನೀರಾವರಿ ಇಲಾಖೆಯೊಂದಿಗೆ ಅಯೋಧ್ಯೆಯನ್ನು ಪರಿಸರ ವಿಜ್ಞಾನದ ಅತ್ಯುತ್ತಮ ಉದಾಹರಣೆಯನ್ನಾಗಿ ಮಾಡುವತ್ತ ಕಾರ್ಯೋನ್ಮುಖವಾಗಿದೆ.
ನಗರಾಭಿವೃದ್ಧಿ ಇಲಾಖೆ, ನಾನ್ ಕನ್ವೆನ್ಶಲ್ ಇಂಧನ ಅಭಿವೃದ್ಧಿ ಸಂಸ್ಥೆ ಜೊತೆಗೆ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ.
749 ಎಕರೆ ವಿಸ್ತೀರ್ಣದ ಬರ್ಹಾಟಾ, ಶಹನವಾಜ್ಪುರ ಮತ್ತು ತಿಹುರಾದಲ್ಲಿ ‘ಹೊಸ ಅಯೋಧ್ಯೆ’ ನಿರ್ಮಿಸಲು ರಾಜ್ಯ ಸರ್ಕಾರ ಪ್ರಸ್ತಾಪಿಸಿದೆ. ಹೊಸ ಅಯೋಧ್ಯೆ ಯೋಜನೆಯು, ಮಠಗಳು ಸೇರಿದಂತೆ 5 ದೇಶಗಳಿಗೆ ಅತಿಥಿ ಗೃಹಗಳನ್ನು ಹೊಂದಿರುತ್ತದೆ ಮತ್ತು ವಿವಿಧ ಪಂಗಡಗಳು, ಸಮುದಾಯಗಳು ಮತ್ತು ಸ್ವಯಂಪ್ರೇರಿತ ಸಂಸ್ಥೆಗಳಿಗೆ 100 ಕ್ಕೂ ಹೆಚ್ಚು ಪ್ಲಾಟ್ಗಳನ್ನು ಹೊಂದಿರುತ್ತದೆ.
ಮುಂದಿನ ಒಂದು ದಶಕದಲ್ಲಿ ಅಯೋಧ್ಯೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಲಿದೆ ಎಂದು ರಾಜ್ಯ ಸರ್ಕಾರ ನಿರೀಕ್ಷಿಸಿದೆ. ಅಂಕಿಅಂಶಗಳ ವಿಶ್ಲೇಷಣೆಯು 2030 ರ ವೇಳೆಗೆ 6.8 ಕೋಟಿಗೂ ಹೆಚ್ಚು ಜನರು ಶ್ರೀ ರಾಮನ ಜನ್ಮಸ್ಥಳಕ್ಕೆ ಪ್ರಯಾಣಿಸಲಿದ್ದಾರೆ ಎಂಬುದನ್ನು ಸೂಚಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.