ನವದೆಹಲಿ: ಈ ಹಬ್ಬದ ಋತುವಿನಲ್ಲಿ ಶಾಪಿಂಗ್ ಮಾಡುವಾಗ ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಕೋರಿದ್ದಾರೆ. ಇಂದು ಬೆಳಿಗ್ಗೆ ತಮ್ಮ ʼಮನ್ ಕಿ ಬಾತ್ʼ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಸ್ಥಳೀಯತೆಗೆ ಧ್ವನಿಯಾಗುವ ಸಂಕಲ್ಪವನ್ನು ಎಲ್ಲರೂ ತೊಡಬೇಕು ಎಂದು ಕೇಳಿಕೊಂಡರು.
ಇಡೀ ಜಗತ್ತು ಭಾರತೀಯ ಉತ್ಪನ್ನಗಳ ಅಭಿಮಾನಿಯಾಗುತ್ತಿದೆ ಎಂದ ಅವರು, ಅನೇಕ ಸ್ಥಳೀಯ ಉತ್ಪನ್ನಗಳು ಜಾಗತಿಕವಾಗುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಒತ್ತಿ ಹೇಳಿದರು ಮತ್ತು ಖಾದಿಯ ಉದಾಹರಣೆಯನ್ನು ನೀಡಿದರು. ಖಾದಿ ದೀರ್ಘಕಾಲದವರೆಗೆ ಸರಳತೆಯ ಸಂಕೇತವಾಗಿ ಉಳಿದಿದೆ ಆದರೆ ಈಗ ಪರಿಸರ ಸ್ನೇಹಿ ಬಟ್ಟೆಯಾಗಿ ಗುರುತಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು. ಖಾದಿ ಆರೋಗ್ಯ ಸ್ನೇಹಿ ಮತ್ತು ಎಲ್ಲಾ ಹವಾಮಾನ ಬಟ್ಟೆಯಾಗಿದ್ದು ಅದು ಫ್ಯಾಷನ್ ಆಗುತ್ತಿದೆ ಎಂದು ಅವರು ಹೇಳಿದರು.
ಖಾದಿಯ ಜನಪ್ರಿಯತೆಯು ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ವಿಶ್ವದ ಹಲವು ಭಾಗಗಳಲ್ಲಿಯೂ ಉತ್ಪಾದನೆಯಾಗುತ್ತಿದೆ. ಮೆಕ್ಸಿಕೊದಲ್ಲಿ ಓಕ್ಸಾಕ ಎಂಬ ಸ್ಥಳವಿದೆ, ಅಲ್ಲಿ ಸ್ಥಳೀಯ ಗ್ರಾಮಸ್ಥರು ಖಾದಿಯನ್ನು ನೇಯ್ಗೆ ಮಾಡುತ್ತಾರೆ ಎಂದು ಪ್ರಧಾನಿ ಹೇಳಿದರು. ಇಂದು, ಈ ಸ್ಥಳದ ಖಾದಿ ಓಕ್ಸಾಕ ಖಾದಿ ಎಂದು ವಿಶ್ವದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ ಎಂದರು.
ದೆಹಲಿಯ ಕನ್ನೌಟ್ ಪ್ಲೇಸ್ ಖಾದಿ ಸ್ಟೋರ್ನಲ್ಲಿ ಈ ಬಾರಿಯ ಗಾಂಧಿ ಜಯಂತಿಯಂದು ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಖರೀದಿಗಳು ನಡೆದಿದೆ. ಇದರೊಂದಿಗೆ ಕೊರೋನಾದ ಈ ಸಂದರ್ಭದಲ್ಲಿ ಖಾದಿ ಮಾಸ್ಕ್ ಕೂಡ ಜನಪ್ರಿಯಗೊಳ್ಳುತ್ತಿದೆ. ದೇಶದಾದ್ಯಂತ ಸ್ವಸಹಾಯ ಸಂಘಗಳು ಮತ್ತು ಇತರ ಸಂಸ್ಥೆಗಳು ಖಾದಿ ಮಾಸ್ಕ್ ತಯಾರಿಸುತ್ತಿವೆ. ಉತ್ತರಪ್ರದೇಶದ ಬಾರಾಬಂಕಿಯಲ್ಲಿ ಸುಮನ್ ಎಂಬ ಮಹಿಳೆ ತನ್ನ ಸ್ವಸಹಾಯ ಸಂಘದ ಇತರ ಮಹಿಳೆಯರೊಂದಿಗೆ ಸೇರಿ ಖಾದಿ ಮಾಸ್ಕ್ ತಯಾರಿಕೆ ಆರಂಭಿಸಿದ್ದಾರೆ. ಪ್ರಸ್ತುತ ಅವರು ಸಾವಿರಾರು ಖಾದಿ ಮಾಸ್ಕ್ಗಳನ್ನು ತಯಾರಿಸುತ್ತಿದ್ದಾರೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.