ಒಡಿಶಾ: ದೇಶದಲ್ಲಿ ಕೊರೋನಾ ಮಹಾಮಾರಿಯ ಅಬ್ಬರದ ನಡುವೆಯೇ ಈ ಬಾರಿ ದಸರಾ ಸಂಭ್ರಮ ಮನೆಮಾಡಿದೆ. ಜನರು ತಮ್ಮ ಮನೆಗಳಿಗಷ್ಟೇ ಹಬ್ಬಗಳನ್ನು ಸೀಮಿತಗೊಳಿಸಿ ಆಚರಣೆ ಮಾಡುವಂತಾಗಿದೆ. ಈ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಮಟ್ಟದ ಮರಳು ಕಲಾಕೃತಿ ರಚಿಸುವ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ಮರಳಿನಲ್ಲಿ ದುರ್ಗಾ ಕಲಾಕೃತಿ ರಚಿಸುವ ಮೂಲಕ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
ರಾಜ್ಯದ ಪುರಿ ಬೀಚ್ನಲ್ಲಿ ಮರಳಿನ ದುರ್ಗಾ ಮೂರ್ತಿಗೆ ಜೀವ ತುಂಬಿದ್ದಾರೆ. ಅದರೊಂದಿಗೆ ಕೊರೋನಾ ಸಂಕಷ್ಟದ ಅವಧಿಯಲ್ಲಿ ಜನರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಬ್ಬಗಳನ್ನು ಆಚರಿಸಿ, ಕೊರೋನಾದಿಂದ ಎಚ್ಚರ ವಹಿಸಿ ಎಂಬ ಸಂದೇಶವನ್ನೂ ಅವರು ರವಾನಿಸಿದ್ದಾರೆ.
ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಕೈ ತೊಳೆಯುವುದು ಮೊದಲಾದವುಗಳನ್ನು ಅನುಸರಿಸುವ ಮೂಲಕ ಆರೋಗ್ಯ ಕಾಳಜಿ ವಹಿಸಿ ಎಂದು ಅವರು ಜನರಲ್ಲಿ ಮನವಿ ಮಾಡಿದ್ದಾರೆ.
ಸದ್ಯ ಸುದರ್ಶನ್ ಅವರ ಮರಳು ಕಲೆಯಲ್ಲರಳಿದ ಸುಂದರ ದುರ್ಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ.
A very happy #DurgaAshtami ….🙏My SandArt at Puri beach in Odisha with message “Celebrate Puja & Fallow Covid guidelines “ #WearAMask #WashYourHands maintain #SocialDistancing pic.twitter.com/0mFBDGzt12
— Sudarsan Pattnaik (@sudarsansand) October 24, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.