ನವದೆಹಲಿ: ತಮಿಳುನಾಡಿನಲ್ಲಿ ಪ್ರತ್ಯೇಕ ರಾಜ್ಯವನ್ನು ಸೃಷ್ಟಿ ಮಾಡಲು ಮಾವೋವಾದಿ- ಜಿಹಾದಿ ಸಂಘಟನೆಗಳು ಕುತಂತ್ರ ನಡೆಸುತ್ತಿವೆ. ಈ ಸಂಘಟನೆಗಳ ಒಂದು ಗುಂಪು ಇತ್ತೀಚಿಗೆ ಪ್ರತ್ಯೇಕ ರಾಜ್ಯದ ಧ್ವಜವನ್ನು ಅನಾವರಣಗೊಳಿಸಿದೆ. ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲಿ ಅಶಾಂತಿ ಮತ್ತು ಗದ್ದಲವೆಬ್ಬಿಸಿಲು ಈ ಗುಂಪು ಕುತಂತ್ರ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಸುಮಾರು 180 ಗುಂಪುಗಳನ್ನು ಹೊಂದಿರುವ ಮಾವೋವಾದಿ-ಜಿಹಾದಿಗಳ ಒಕ್ಕೂಟವು ಜೂಮ್ ಮೂಲಕ ಇತ್ತೀಚಿಗೆ ಕಾನ್ಫರೆನ್ಸ್ ನಡೆಸಿ, ತನ್ನ ಸಂಚನ್ನು ಕಾರ್ಯರೂಪಕ್ಕೆ ತರಲು ಚರ್ಚೆ ನಡೆಸಿದೆ ಎಂದು ಹೇಳಲಾಗಿದೆ.
ದ್ರಾವಿಡರ್ ಕಝಗಮ್ ನಾಯಕ ಕೆ.ವೀರಮಣಿ ಮತ್ತು ಆತನ ಆಪ್ತ ಮಾ ಪೂಗುಂಡ್ರನ್, ಮಾವೋವಾದಿ ಬೆಂಬಲಿಗ ಡೇನಿಯಲ್ ಗಾಂಧಿ ತಿರುಮುರುಗನ್ ಗಾಂಧಿ ಸೇರಿದಂತೆ ಕೆಲ ಸ್ವಯಂಘೋಷಿತ ಪರಿಸರವಾದಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಎಲ್ಟಿಟಿ ಬೆಂಬಲಿಗರು ಸೇರಿ ಪ್ರತ್ಯೇಕ ರಾಜ್ಯದ ಧ್ವಜವನ್ನು ಅನಾವರಣಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಈ ಕೃತ್ಯವನ್ನು ಹಿಂದೂ ಮಕ್ಕಳ್ ಕಚ್ಚಿ ಸಂಘಟನೆ ತೀವ್ರವಾಗಿ ಖಂಡಿಸಿದೆ. “ತಮಿಳುನಾಡಿನಲ್ಲಿ ಏನಾಗುತ್ತಿದೆ? ತಮಿಳುನಾಡಿಗೆ ಪ್ರತ್ಯೇಕ ರಾಜ್ಯದ ಧ್ವಜ ನೀಡಲು ಅವರಿಗೆ ಅಧಿಕಾರ ನೀಡಿದವರು ಯಾರು?” ಎಂದು ಹಿಂದೂ ಕಚ್ಚಿ ಸಂಘಟನೆಯ ಮುಖ್ಯಸ್ಥ ಅರ್ಜುನ ಸಂಪತ್ ಪ್ರಶ್ನೆ ಮಾಡಿದ್ದಾರೆ. ಯಾವ ಆಧಾರದ ಮೇಲೆ ಅವರು ರಾಜ್ಯವನ್ನು ಒಡೆಯಲು ಬಯಸುತ್ತಿದ್ದಾರೆ? ಭಾಷೆ ಆಧಾರದ ಮೇಲೆಯೇ ಅಥವಾ ಜನಾಂಗದ ಆಧಾರದ ಮೇಲೆಯೇ ಎಂದು ಪ್ರಶ್ನಿಸಿದ್ದಾರೆ.
ಕೆಲವು ವಿದೇಶಿ ಶಕ್ತಿಗಳ ಕೈವಾಡದೊಂದಿಗೆ ರಾಷ್ಟ್ರ ದ್ರೋಹಿಗಳು ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಡಿಎಂಕೆ ಪಕ್ಷ ಇಂತಹ ಗುಂಪುಗಳನ್ನು ಪೋಷಣೆ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ನಕ್ಸಲರು, ದ್ರಾವಿಡ ಪಕ್ಷಗಳು, ನಾಸ್ತಿಕರು ಡಿಎಂಕೆ ಪಕ್ಷದ ಅಡಿಯಲ್ಲಿ ಇಂತಹ ದುಷ್ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದಿದ್ದಾರೆ.
ಇಂತಹ ಗುಂಪುಗಳು ಭಾರತ ಮತ್ತು ಹಿಂದೂ ಧರ್ಮದ ವಿರುದ್ಧ ಪಿತೂರಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ರಾಜ್ಯ ಸರ್ಕಾರದ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.