ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ ಅಭಿಯಾನದಿಂದ ದೇಶದಲ್ಲಿ ಮಾಲಿನ್ಯ ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಲಾಭವೂ ಆಗಿದೆ ಎಂಬ ವಿಚಾರವನ್ನು ಅಂತರರಾಷ್ಟ್ರೀಯ ವರದಿಯೊಂದು ಇದೀಗ ಬಹಿರಂಗಗೊಳಿಸಿದೆ.
ಗಾಂಧೀಜಿ ಅವರ ಕಲ್ಪನೆಯಂತೆ ಈ ಸ್ವಚ್ಛ ಭಾರತ್ ಅಭಿಯಾನವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014 ರ ಅಕ್ಟೋಬರ್ 2 ರಂದು ದೇಶದೆಲ್ಲೆಡೆ ಆರಂಭಿಸಿತ್ತು. ಈ ಅಭಿಯಾನದ ಮೂಲಕ ದೇಶದ ಪ್ರತಿ ಮನೆಗೆ ವಾರ್ಷಿಕ 53,596 ರೂ. ಉಳಿತಾಯವಾಗುತ್ತಿದೆ ಎಂದು ಈ ವರದಿ ಹೇಳಿದೆ.
2019 ರ ವೇಳೆಗೆ ಈ ಯೋಜನೆಯಡಿಯಲ್ಲಿ ದೇಶವನ್ನು ಬಯಲು ಶೌಚ ಮುಕ್ತ ದೇಶವನ್ನಾಗಿಸಲು ಗುರಿ ಹೊಂದಲಾಗಿತ್ತು. ಜೊತೆಗೆ ಈ ಕಾರ್ಯದ ಸಾಧನೆಗಾಗಿ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರಿಂದ ದೇಶದಲ್ಲಿ ನೈರ್ಮಲ್ಯ ಹೆಚ್ಚಿದೆ. ಜೊತೆಗೆ ಹೆಚ್ಚಿನ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ಅಭಿಯಾನ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮೆರೆದಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.