ನವದೆಹಲಿ: ಕೊರೋನಾ ಸೋಂಕಿನ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವೂ ದೊಡ್ಡ ಮಟ್ಟದ ಹೋರಾಟವನ್ನು ಮಾಡಿದೆ. ಕೊರೋನಾ ಸೋಂಕು ನಿವಾರಣೆಗಾಗಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಇನ್ನಿತರ ಪರಿಣಾಮಕಾರಿ ಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕವೂ ಸೋಂಕಿನ ಪ್ರಮಾಣವನ್ನು ಇಳಿಕೆ ಮಾಡಲು ಪ್ರಯತ್ನ ನಡೆಸಿತ್ತು.
ಜೊತೆಗೆ ಕೊರೋನಾ ಹೋರಾಟದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ mygov ಅಡಿಯಲ್ಲಿ ಕೊರೋನಾ ಕುರಿತ ರಸಪ್ರಶ್ನೆಯನ್ನು ಮೇ 1 , 2020 ರಂದು ಪ್ರಾರಂಭ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ದೇಶದ ಅನೇಕ ಭಾಗಗಳ ಸುಮಾರು 2,37,104 ಜನರು ಭಾಗವಹಿಸುವ ಮೂಲಕ ಯಶಸ್ಸು ಗಳಿಸಿದೆ. ಇದೀಗ ಈ ರಸಪ್ರಶ್ನೆಯ 10 ವಿಜೇತರನ್ನು ಆಯ್ಕೆ ಮಾಡಲಾಗಿದೆ.
ಸ್ವರೂಪ್ ತಲೋಕರ್ 19586074, ಶಿವ್ಶಂಕರ್ 20373894, ನೆಮೈ ಲೋಹರ್ 20114384, ಆದಿತ್ಯ ಮಿಶ್ರಾ 20287104, ಎನ್ ಮೆಹತಾಬ್ ನಸ್ರೀನ್ 3161954, ಗಾಯತ್ರಿ 20469344, ಅನ್ಶು ವ್ಯಾಸ್ 20378244, ಬಿದ್ಯಾ ಭಾರತಿ 20733304, ಲಕ್ಷ 19599764, ಜೈದ್ ನಾಸಿಮ್ ಖಾನ್ 16093574 ಎಂಬವರು ಈ ಸ್ಪರ್ಧೆಯಲ್ಲಿ ವಿಜಯಶಾಲಿಗಳಾಗಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಜೊತೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರನ್ನೂ ಪ್ರಶಂಸಿಸಿದೆ.
ಇನ್ನು ಕೊರೋನಾ ಸಂದರ್ಭದಲ್ಲಿ ಭಾರತ ವಹಿಸಿದ್ದ ಮುಂಜಾಗ್ರತಾ ಕ್ರಮಗಳು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಪ್ರಶಂಸೆಗೆ ಪಾತ್ರವಾಗಿತ್ತು. ಲಾಕ್ಡೌನ್ ಸೇರಿದಂತೆ ಇನ್ನಿತರ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಕೊರೋನಾ ಸೋಂಕಿನಿಂದ ಉಂಟಾಗುವ ಸಾವಿನ ಪ್ರಮಾಣದಲ್ಲಿಯೂ ಭಾರತ ಹಿಡಿತ ಸಾಧಿಸುವ ಮೂಲಕ ಇತರ ದೇಶಗಳಿಗೂ ಮಾದರಿಯಾಗಿತ್ತು. ಆ ಮೂಲಕ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಭಾರತ ದೊಡ್ಡ ಮಟ್ಟದಲ್ಲಿ ಕೊರೋನಾ ನಿಯಂತ್ರಣದಲ್ಲಿ ಸಾಧನೆ ಮೆರೆದಿತ್ತು.
ಪ್ರಸ್ತುತ ಕೊರೋನಾ ಮಾದರಿ ಪರೀಕ್ಷೆಗಳನ್ನು ಅತೀ ಹೆಚ್ಚು ನಡೆಸುವ ಮೂಲಕವೂ ಭಾರತ ಸೋಂಕು ನಿಯಂತ್ರಣಕ್ಕೆ ಪ್ರಯತ್ನ ನಡೆಸುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರ ಸೂಚಿಸುವ ಎಲ್ಲಾ ಮುಂಜಾಗ್ರತಾ ಕ್ರಮಗಳನನ್ನು ಅನುಸರಿಸಿ ಕೊರೋನಾದಿಂದ ರಕ್ಷಿಸಿಕೊಳ್ಳುವಂತೆಯೂ ಸರ್ಕಾರ ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದೆ.
We are excited to announce the winners of the COVID-19 quiz which was hosted on MyGov on 1st May 2020. Congratulations to all the winners. Read the blog here: https://t.co/oI6zRCBXnN pic.twitter.com/De121PtXui
— MyGovIndia (@mygovindia) October 22, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.