ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ಗುಜರಾತ್ನಲ್ಲಿ ಮೊಟ್ಟ ಮೊದಲ ಸೀಪ್ಲೇನ್ ಸೇವೆಯನ್ನು ಉದ್ಘಾಟಿಸುವ ನಿರೀಕ್ಷೆಯಿದೆ. ಈ ಸೀಪ್ಲೆನ್ ಸಬರಮತಿ ನದಿಯ ಮುಂಭಾಗದಿಂದ ಏಕತಾ ಪ್ರತಿಮೆಗೆ ಸಂಚರಿಸಲಿದೆ.
ಉದ್ಘಾಟನೆಯ ಸಂದರ್ಭದಲ್ಲಿ ಈ ಸೀಪ್ಲೇನ್ ಅಹಮದಾಬಾದ್ನ ಸಬರಮತಿ ರಿವರ್ಫ್ರಂಟ್ನಿಂದ ನರ್ಮದಾ ಜಿಲ್ಲೆಯ ಕೆವಾಡಿಯಾ ಕಾಲೋನಿಯಲ್ಲಿರುವ ಏಕತಾ ಪ್ರತಿಮೆವರೆಗೆ ಹಾರಲಿದೆ ಎನ್ನಲಾಗಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನಾಚರಣೆಯಾದ ಅಕ್ಟೋಬರ್ 31 ರಿಂದ ಗುಜರಾತ್ ರಾಜ್ಯದಲ್ಲಿ ಮೊಟ್ಟಮೊದಲ ಸೀಪ್ಲೇನ್ ಸೇವೆ ಪ್ರಾರಂಭವಾಗಲಿದೆ ಎಂದು ಗುಜರಾತ್ ಸರ್ಕಾರ ಈ ಹಿಂದೆ ಘೋಷಿಸಿತ್ತು.
ಗುಜರಾತ್ ಸರ್ಕಾರದ ಪ್ರಕಟನೆಯ ಪ್ರಕಾರ, “ಗುಜರಾತ್ನಲ್ಲಿ ಮೊಟ್ಟ ಮೊದಲ ಬಾರಿಗೆ ಸೀಪ್ಲೇನ್ ಸೇವೆಗಳು ಅಹಮದಾಬಾದ್ನ ಸಬರಮತಿ ರಿವರ್ಫ್ರಂಟ್ನಿಂದ ಕೆವಾಡಿಯಾದ ಏಕತಾ ಪ್ರತಿಮೆವರೆಗೆ ಇರಲಿದೆ ಮತ್ತು ಇದು ಕೈಗೆಟುಕುವ ದರದಲ್ಲಿ ವಾಯು ಸಂಪರ್ಕವನ್ನು ಒದಗಿಸುತ್ತದೆ” ಎಂದಿದೆ.
ದೇಶದಲ್ಲೇ ಈ ರೀತಿಯ ಸೀ ಪ್ಲೇನ್ ಸೇವೆ ಮೊದಲನೆಯದು. ಇದನ್ನು ಖಾಸಗಿ ವಿಮಾನಯಾನ ಸ್ಪೈಸ್ ಜೆಟ್ ನಿರ್ವಹಿಸಲಿದ್ದು, ಇದು 19 ಆಸನಗಳ ವಿಮಾನವನ್ನು ನಿರ್ವಹಿಸಲಿದ್ದು, ಇದು 12 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ.
“ಪ್ರತಿ ಬದಿಯಲ್ಲಿ ಅಹಮದಾಬಾದ್ ಮತ್ತು ಕೆವಾಡಿಯಾ ನಡುವೆ ದಿನಕ್ಕೆ ನಾಲ್ಕು ವಿಮಾನಗಳು ಇರಲಿವೆ – ಅಂದರೆ ನಾಲ್ಕು ಆಗಮನಗಳು ಮತ್ತು ನಾಲ್ಕು ನಿರ್ಗಮನಗಳು. ಪ್ರತಿ ವ್ಯಕ್ತಿಗೆ ಟಿಕೆಟ್ ದರ ಸುಮಾರು 4,800 ರೂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.