ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ) ಅಡಿಯಲ್ಲಿ ಕೇವಲ ಆರು ತಿಂಗಳಲ್ಲಿ 26.1 ಕೋಟಿ ಮಾನವ ದಿನಗಳ ಉದ್ಯೋಗವನ್ನು ರಚಿಸಿದ ದಾಖಲೆಯನ್ನು ಉತ್ತರ ಪ್ರದೇಶ ಮಾಡಿದೆ. ವಾರ್ಷಿಕವಾಗಿ 26 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಯ ದಾಖಲೆಯ ಗುರಿ ಇಡಲಾಗಿತ್ತು, ಆದರೆ ಅದು 6 ತಿಂಗಳಲ್ಲಿ ಈ ಸಾಧನೆ ಮಾಡಿದೆ.
ಯೋಜನೆಯ ವಾರ್ಷಿಕ ಗುರಿಯನ್ನು ರಾಜ್ಯವು ಅರ್ಧದಷ್ಟು ಅವಧಿಯಲ್ಲಿ ಸಾಧಿಸಿದ್ದು ಇದೇ ಮೊದಲು.
ಲಾಕ್ ಡೌನ್ ಸಮಯದಲ್ಲಿ ರಾಜ್ಯಕ್ಕೆ ಮರಳಿದ ಲಕ್ಷಾಂತರ ವಲಸಿಗರಿಗೆ ಮನ್ರೇಗಾ ಅಡಿಯಲ್ಲಿ ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವ ಮೂಲಕ ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಈ ಸಾಧನೆ ಮಾಡಿದೆ.
ಸರ್ಕಾರದ ವಕ್ತಾರರ ಪ್ರಕಾರ, ಯೋಗಿ ಆದಿತ್ಯನಾಥ್ ಸರ್ಕಾರವು ಲಾಕ್ ಡೌನ್ ಘೋಷಣೆಯಾದ ಒಂದು ತಿಂಗಳ ನಂತರ ಏಪ್ರಿಲ್ 21 ರಿಂದ ವಲಸಿಗರಿಗೆ ಉದ್ಯೋಗ ನೀಡಲು ಪ್ರಾರಂಭಿಸಿದೆ.
ಸಾಂಕ್ರಾಮಿಕ ತೀವ್ರತೆಯ ಮಧ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಮರಳಿದ ವಲಸಿಗರಿಗೆ ಉದ್ಯೋಗ ಒದಗಿಸಲು ಈ ಯೋಜನೆ ಅಪಾರ ಸಹಾಯ ಮಾಡಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನದಿಗಳ ಪುನರುಜ್ಜೀವನ, ಕೊಳಗಳ ನಿರ್ಮಾಣ ಮತ್ತು ಮರಗಳನ್ನು ನೆಡುವುದು ಸೇರಿದಂತೆ ವಿವಿಧ ಪ್ರಮುಖ ಕಾರ್ಯಗಳನ್ನು ನಿರ್ವಹಿಸುವಾಗ ಈ ಯೋಜನೆಯನ್ನು ಕಾರ್ಯತಂತ್ರದ ರೀತಿಯಲ್ಲಿ ಜಾರಿಗೆ ತರಲಾಯಿತು. “ಈ ಎಲ್ಲಾ ಚಟುವಟಿಕೆಗಳು ವಲಸಿಗರಿಗೆ ಉದ್ಯೋಗ ನೀಡುವಲ್ಲಿ ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಿದೆ” ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.