ಲಕ್ನೋ: ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಯುಪಿ ಸರ್ಕಾರವು ‘ಮಿಷನ್ ಶಕ್ತಿ’ ಎಂಬ ಆರು ತಿಂಗಳ ಅಭಿಯಾನಕ್ಕೆ ಚಾಲನೆಯನ್ನು ನೀಡಿದೆ, ಆದರೆ ಮಹಿಳಾ ಸುರಕ್ಷತೆಯ ನಿಟ್ಟಿನಲ್ಲಿ ದೃಢ ಹೆಜ್ಜೆಯನ್ನು ಅದು ಕಳೆದ ಒಂದು ವರ್ಷದಿಂದಲೇ ಆರಂಭಿಸಿದೆ. ಕಳೆದ ಒಂದು ವರ್ಷದಲ್ಲಿ ಮಹಿಳೆಯರ ಮೇಲಿನ 11 ಅಪರಾಧ ಪ್ರಕರಣಗಳಲ್ಲಿ 14 ಆರೋಪಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಖಚಿತಪಡಿಸಲಾಗಿದೆ.
“ಮರಣದಂಡನೆ ಶಿಕ್ಷೆ ಅಪರೂಪದ ಶಿಕ್ಷೆಯಾಗಿದೆ. ಆದರೆ, ತ್ವರಿತ ವಿಚಾರಣೆಯಿಂದ ಮಹಿಳಾ ಪೀಡಕರಿಗೆ ಮರಣದಂಡನೆ ಶಿಕ್ಷೆ ಖಾತ್ರಿಪಡಿಸಲಾಗಿದೆ” ಎಂದು ರಾಜ್ಯ ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಯತ್ನಗಳು ನಮ್ಮ ವ್ಯವಸ್ಥೆಯನ್ನು ಸುಧಾರಿಸುತ್ತಿದೆ ಮತ್ತು ಬಲಪಡಿಸುತ್ತಿದೆ, ಇದರಿಂದಾಗಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಮೇಲಿನ ಅಪರಾಧಗಳಿಗೆ ಬಲಿಯಾದವರಿಗೆ ತ್ವರಿತ ನ್ಯಾಯ ದೊರಕುತ್ತದೆ” ಎಂದಿದ್ದಾರೆ.
ರಾಜ್ಯದ ಮಹಿಳೆಯರ ಮೇಲಿನ ಅಪರಾಧಕ್ಕಾಗಿ 11 ಜನರಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧದಲ್ಲಿ ಸರಕಾರದ ಪ್ರಯತ್ನದಿಂದಾಗಿ 14 ಜನರಿಗೆ ಮರಣದಂಡನೆ ಶಿಕ್ಷೆ, 11 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಇತರ ಎಂಟು ಜನರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಅಂತೆಯೇ, 88 ಪ್ರಕರಣಗಳಲ್ಲಿ 117 ಅಪರಾಧಿಗಳ ಜಾಮೀನು ಪ್ರಬಲ ಪ್ರಾಸಿಕ್ಯೂಷನ್ ಪರಿಣಾಮದಿಂದ ರದ್ದುಗೊಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.