ಮಂಗಳೂರು: ಮಂಗಳೂರಿನ ರೂಟ್ ನಂ. 27 ರಲ್ಲಿ ಸಂಚರಿಸುವ ಗಣೇಶ್ ಪ್ರಸಾದ್ ಬಸ್ಸಿನ ತುಂಬಾ ಮಾದಕ ದ್ರವ್ಯದ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ಗಳನ್ನು ಅಳವಡಿಸಲಾಗಿದ್ದು, ಇದು ಎಲ್ಲರ ಗಮನ ಸೆಳೆಯುತ್ತಿದೆ.
ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಇತ್ತೀಚೆಗೆ ಹೆಚ್ಚು ಸದ್ದು ಮಾಡಿದ ವಿಚಾರ. ಬುದ್ಧಿವಂತ ಜನರ ಜಿಲ್ಲೆ ಎನಿಸಿಕೊಂಡಿರುವ ಮಂಗಳೂರಿನಲ್ಲಿಯೂ ಡ್ರಗ್ಸ್ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸಲು ಮುಂದಾಗಿರುವ ನಗರದ ಸಿಟಿ ಬಸ್ ಗಣೇಶ್ ಪ್ರಸಾದ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. Say No To Drugs ಎಂಬಿತ್ಯಾದಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಸಂದೇಶಗಳನ್ನು ಹೊಂದಿರುವ ಪೋಸ್ಟರ್ ಈ ಬಸ್ಸಿನ ತುಂಬಾ ರಾರಾಜಿಸುತ್ತಿದೆ.
ರಾಷ್ಟ್ರ ಕಟ್ಟಬೇಕಾದ ನಮ್ಮ ಯುವ ಜನತೆ ಡ್ರಗ್ಸ್ನಂತಹ ಮಾದಕ ಜಾಲಕ್ಕೆ ಬೀಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಬಸ್ನಲ್ಲಿ ಡ್ರಗ್ಸ್ ವಿರುದ್ಧದ ಚಿತ್ರಗಳು, ಎಚ್ಚರಿಕೆಯ ಸಂದೇಶಗಳನ್ನು ಅಂಟಿಸುವ ಮೂಲಕ ಬಸ್ ಮಾಲಕರು ಜಾಗೃತಿ ಮೂಡಿಸುತ್ತಿರುವುದು ಉತ್ತಮ ವಿಚಾರವಾಗಿದೆ.
ಈ ಹಿಂದೆ ತುಳು ಲಿಪಿಯ ವರ್ಣಮಾಲೆಗಳ ಮೂಲಕ ಇದೇ ಬಸ್ ಗಮನ ಸೆಳೆದಿತ್ತು. ತುಳುವನ್ನು ಎಂಟನೇ ಪರಿಚ್ಚೇಧಕ್ಕೆ ಸೇರಿಸುವಂತೆ ಮಾಡಲು ತುಳು ಅಕ್ಷರಗಳ ಸ್ಟಿಕ್ಕರ್ಗಳನ್ನು ಅಂಟಿಸಿ ಕಾಳಜಿ ವ್ಯಕ್ತಪಡಿಸಿತ್ತು. ಇದೀಗ ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸಿ ಸಮಾಜ ಸೇವೆಯನ್ನು ಬಸ್ ಮಾಲಿಕರು ಮಾಡಿದ್ದಾರೆ.
ಸಿಟಿ ಬಸ್ಗಳನ್ನು ಜನರ ಪ್ರಯಾಣಕ್ಕೆ ಮಾತ್ರವಲ್ಲ, ಬದಲಾಗಿ, ಜನಜಾಗೃತಿ ಮೂಡಿಸುವ ವೇದಿಕೆಯಾಗಿಯೂ ಬಳಸಲೂ ಸಾಧ್ಯ ಎಂಬುದನ್ನು ಈ ಬಸ್ ಸಾಧಿಸಿ ತೋರಿಸಿದೆ. ಆ ಮೂಲಕ ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.