ಮೈಸೂರು: ಕೊರೋನಾ ಕರಿ ನೆರಳು ಈ ಬಾರಿಯ ನಾಡಹಬ್ಬ ದಸರಾದ ಮೇಲೂ ಬಿದ್ದಿದೆ. ವರ್ಷಂಪ್ರತಿ ದೇಶ ವಿದೇಶದ ಕೋಟ್ಯಂತರ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ನವರಾತ್ರಿ ಈ ಬಾರಿ ಕೆಲವೇ ಜನರ ಸಮ್ಮುಖದಲ್ಲಿ ನಡೆಯುವಂತಾಗಿದೆ.
ಈ ಬಾರಿ ಮೈಸೂರು ದಸರಾದ ಜಂಬೂ ಸವಾರಿ ಕೇವಲ 200-250 ಮೀಟರ್ ರಸ್ತೆಯಲ್ಲಿ ಮಾತ್ರವೇ ನಡೆಯಲಿದೆ. ದಸರಾ ಹಬ್ಬ ಮೈಸೂರು ಅರಮನೆಯ ಆವರಣಕ್ಕೆ ಮತ್ತು ಚಾಮುಂಡಿ ಬೆಟ್ಟಕ್ಕಷ್ಟೇ ಸೀಮಿತವಾಗಿದ್ದು, ಇದೇ ಮೊದಲ ಬಾರಿಗೆ ಕೆಲವೇ ಮೀಟರ್ ಅಂತರದಲ್ಲಿ ಜಂಬೂ ಸವಾರಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿಯ ಜಂಬೂಸವಾರಿ ಅರಮನೆಯ ಮುಂಭಾಗದಿಂದ ಉತ್ತರ ದ್ವಾರದವರೆಗೆ ಮಾತ್ರವೇ ನಡೆಯಲಿದೆ. ಪ್ರತಿ ವರ್ಷವೂ ಅರಮನೆಯಿಂದ ಬನ್ನಿ ಮಂಟಪದ ವರೆಗೆ ಜಂಬೂ ಮೆರವಣಿಗೆ ನಡೆಯುತ್ತಿತ್ತು. ಆದರೆ ಈ ಬಾರಿಯ ಜಂಬೂ ಸವಾರಿಯ ಮೇಲೆಯೂ ಕೊರೋನಾ ಪರಿಣಾಮ ಬೀರಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.