ಮಂಗಳೂರು: ಆಸಕ್ತ ಯುವಜನರಿಂದ ಅಶಕ್ತ ಬಡ ಕುಟುಂಬಗಳಿಗಾಗಿ ಎಂಬ ಧ್ಯೇಯದೊಂದಿಗೆ ಸಮಾಜದ ಬಡ ಜನರ ಸಹಾಯಕ್ಕಾಗಿ ಸದಾ ಮಿಡಿಯುವ ಹಿಂದೂ ವಾರಿಯರ್ಸ್ ತಂಡ ತನ್ನ 65 ನೇ ಸಹಾಯ ಯೋಜನೆಯನ್ನು ಯಶಸ್ವಿಯಾಗಿ ಮುಗಿಸಿದೆ.
ಮಂಗಳೂರಿನ ಸುರತ್ಕಲ್ನ ಅಂಬೇಡ್ಕರ್ ಕಾಲೋನಿ ನಿವಾಸಿ ಅಶಕ್ತ ಕುಟುಂಬವೊಂದಕ್ಕೆ ಕೊರೋನಾ ಸಂಕಷ್ಟದ ನಡುವೆಯೂ ತಂಡದ ಸದಸ್ಯರು 20 ಸಾವಿರ ರೂ. ಗಳನ್ನು ಒಟ್ಟುಗೂಡಿಸಿ ನೀಡುವ ಮೂಲಕ ಮಾನವೀಯತೆ ಮೆರೆದು ಮಾದರಿಯಾಗಿದ್ದಾರೆ.
ದಿ. ರಾಮಪ್ಪ ಎಂಬವರ ಪತ್ನಿ ಲಕ್ಷ್ಮೀ ಅವರು ಅಸೌಖ್ಯದಿಂದ ಹಾಸಿಗೆ ಹಿಡಿದಿರುವ ಮನೆಗೆ ಆಧಾರ ಸ್ಥಂಭದಂತಿದ್ದ 25 ವರ್ಷದ ಮಗ ಸುರೇಶ್ ಅವರೊಂದಿಗೆ ಮುರುಕಲು ಮನೆಯಲ್ಲಿ ಕಷ್ಟಕರ ಬದುಕು ನಡೆಸುತ್ತಿದ್ದಾರೆ. ಅವರು ಮಗನ ಚಿಕಿತ್ಸೆ ಮತ್ತು ದಿನನಿತ್ಯದ ಕೂಳು ಸಂಪಾದನೆ ಮಾಡಲು ಪರದಾಡುತ್ತಿದ್ದಾರೆ. ಇವರ ಸಂಕಷ್ಟಕ್ಕೆ ಸ್ಪಂದಿಸಿದ ಹಿಂದೂ ವಾರಿಯರ್ಸ್ ತಂಡ 20 ಸಾವಿರ ರೂ. ಗಳನ್ನು ನೀಡಿದ್ದು, ಆ ಮೂಲಕ ಅಶಕ್ತರಿಗೆ ಭರವಸೆ ತುಂಬುವ ಕೆಲಸ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.