ಹುಬ್ಬಳ್ಳಿ: ಮುಂದಿನ ನಾಲ್ಕು ವರ್ಷಗಳಲ್ಲಿ ಮಂಜೂರಾಗಿರುವ ಎಲ್ಲಾ ಮಾರ್ಗಗಳಲ್ಲಿಯೂ ವಿದ್ಯುತ್ ರೈಲುಗಳನ್ನು ಓಡಿಸುವ ಸಂಬಂಧ ನೈರುತ್ಯ ರೈಲ್ವೆ ಚಿಂತನೆ ನಡೆಸುತ್ತಿದೆ.
ಪರಿಸರ ಮಾಲಿನ್ಯ ತಡೆಗಟ್ಟುವ ಸಲುವಾಗಿ ಎಲ್ಲಾ ರೈಲ್ವೆ ಮಾರ್ಗಗಳಲ್ಲಿಯೂ ವಿದ್ಯುದೀಕರಣ ಮಾಡಲು ಯೋಜನೆ ಹಾಕಿಕೊಂಡಿದೆ. ಡೀಸೆಲ್ ಬಳಕೆಯಿಂದ ಖರ್ಚು ಹೆಚ್ಚು, ಜೊತೆಗೆ ಪರಿಸರದ ಮೇಲೂ ದುಷ್ಪರಿಣಾಮ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಿದ್ಯುತ್ ಎಂಜಿನ್ಗಳ ಬಳಕೆಗೆ ಮುಂದಾಗಿದೆ. ಜೊತೆಗೆ ಡಿಸೇಲ್ಗಾಗಿ ಬೇರೆ ದೇಶಗಳ ಮೇಲಿನ ಅವಲಂಬನೆಯೂ ಈ ಯೋಜನೆ ಜಾರಿಯಾದಲ್ಲಿ ಕಡಿಮೆಯಾಗುತ್ತದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.
ರೈಲುಗಳ ವಿದ್ಯುದೀಕರಣವಾದಲ್ಲಿ ಅದಕ್ಕೆ ಬೇಕಾದ ವಿದ್ಯುತ್ ಅನ್ನು ದೇಶದಲ್ಲೇ ಉತ್ಪಾದಿಸಬಹುದಾಗಿದೆ. 2019-20 ನೇ ಸಾಲಿನಲ್ಲಿ ಹುಬ್ಬಳ್ಳಿ ವಿಭಾಗದ ಹಲವು ಮಾರ್ಗಗಳಲ್ಲಿ ವಿದ್ಯುತ್ ರೈಲು ಓಡಿಸಲು ಯೋಜನೆ ಹಾಕಿಕೊಂಡಿದೆ. ಲಾಕ್ಡೌನ್ಗೂ ಮೊದಲು ನೈರುತ್ಯ ರೈಲ್ವೆಯ ವಿಜಯವಾಡ-ಹುಬ್ಬಳ್ಳಿ-ವಿಜಯವಾಡ, ತಿರುಪತಿ-ಹುಬ್ಬಳ್ಳಿ-ತಿರುಪತಿ ನಡುವೆ ವಿದ್ಯುದೀಕರಣ ಎಂಜಿನ್ ರೈಲುಗಳನ್ನು ಓಡಿಸಲಾಗುತ್ತಿತ್ತು. ಕೊರೋನಾ ಸಂದರ್ಭದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಮಾರ್ಗಸೂಚಿ ಅನುಸರಿಸಿ ವಿದ್ಯುತ್ ಇಂಜಿನ್ ರೈಲುಗಳ ಓಡಾಟ ನಿಲ್ಲಿಸಲಾಗಿತ್ತು. ಮುಂದಿನ ದಿನಗಳಲ್ಲಿ ಮತ್ತೆ ವಿದ್ಯುತ್ ರೈಲುಗಳ ಓಡಾಟ ಆರಂಭಿಸುವ ಚಿಂತನೆ ಇರುವುದಾಗಿಯೂ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.