ನವದೆಹಲಿ: ಶಾಂತಿಗೆ ಸಂಬಂಧಿಸಿದಂತೆ ಲಡಾಕ್ ಗಡಿಯಲ್ಲಿ ಚೀನಾದ ಬದ್ಧತೆಯ ಮೇಲೆ ಸಂದೇಹ ಹೊಂದಿರುವ ಭಾರತ, ವಾಸ್ತವ ನಿಯಂತ್ರಣ ರೇಖೆಯ ಕನಿಷ್ಠ 7 ಪ್ರದೇಶಗಳಲ್ಲಿ ಚೀನಾ ವಶದಲ್ಲಿದ್ದ ಆಯಕಟ್ಟಿನ ಸ್ಥಳಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಈ ಕುರಿತ ಮಾಹಿತಿಯನ್ನು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ನೀಡಿರುವ ಮಾಹಿತಿಯನ್ನು ಆಧರಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳುವುದಕ್ಕೆ ಪೂರಕವಾಗಿ ನಡೆಸುವ ಮಾತುಕತೆಯಲ್ಲಿ ಚೀನಾ ಭಾಗವಹಿಸುವಂತೆ ಮಾಡಲು, ಈ ಸಂದರ್ಭದಲ್ಲಿ ತೆಗೆದುಕೊಳ್ಳುವ ನಿರ್ಣಯಗಳಿಗೆ ಚೀನಾ ಸಮ್ಮತಿ ಸೂಚಿಸುವಂತೆ ಮಾಡಲು ಭಾರತ ಈ ತಂತ್ರಕ್ಕೆ ಮುಂದಾಗಿದೆ. ಕುತಂತ್ರಿ ಚೀನಾದ ಮೇಲಿನ ಅಪನಂಬಿಕೆಯಿಂದ ಭಾರತೀಯ ಸೇನೆ ಈ ಕ್ರಮಕ್ಕೆ ಮುಂದಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಪಾಂಗಾಂಗ್ ತ್ಸೋ ಉತ್ತರ ದಂಡೆಯಲ್ಲಿ ಭಾರತ ಗುರುತಿಸಿದ್ದ ಗಡಿಗಳನ್ನು ಚೀನಾ ಅತಿಕ್ರಮವಾಗಿ ಪ್ರವೇಶಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ಚೀನಾ ಊಹಿಸಿಕೊಂಡಿರದ ರೀತಿಯಲ್ಲಿ ಏಳು ಪ್ರದೇಶಗಳ ವಾಸ್ತವ ನಿಯಂತ್ರಣ ರೇಖೆ ದಾಟಿ ಚೀನಾಗೆ ಹೊಡೆತ ನೀಡಿದೆ. ಭಾರತದ ಈ ಕ್ರಮದಿಂದ ಉಭಯ ರಾಷ್ಟ್ರಗಳ ನಡುವಿನ ಶಾಂತಿ ಮಾತುಕತೆ ಸಂದರ್ಭದಲ್ಲಿ ಚೀನಾ ಗಂಭೀರವಾಗಿ ಪಾಲ್ಗೊಳ್ಳಬೇಕಾದ ಮತ್ತು ಅಲ್ಲಿ ತೆಗೆದುಕೊಳ್ಳಲಾಗುವ ನಿರ್ಣಯಗಳಿಗೆ ಬದ್ಧವಾಗಿರಬೇಕಾದ ಅನಿವಾರ್ಯತೆಯೂ ಚೀನಾಗೆ ಬಂದೊದಗಿದೆ.
ಭಾರತೀಯ ಸೇನೆಯ ಹಿಡಿತ ಬಲಿಷ್ಠವಾಗಿರುವುದರಿಂದ ಈ ಬಾರಿಯ ಮಾತುಕತೆಯಲ್ಲಿ ಚೀನಾ ಹಿಂದೆ ಸರಿಯಲಾರದು. ಪ್ರತಿ ಬಾರಿ ನಡೆಯುವ ಶಾಂತಿ ಮಾತುಕತೆಯಲ್ಲಿಯೂ ನಾಟಕೀಯವಾಗಿ ಅಥವಾ ಉದ್ಧಟತನದಿಂದ ಭಾಗಿಯಾಗುತ್ತಿದ್ದ ಚೀನಾಗೆ ಈ ಬಾರಿ ಭಾರತ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡಿದೆ. ಈ ಕಾರಣದಿಂದ ಚೀನಾ ಆಸಕ್ತಿಯಿಂದ ಸಭೆಗಳಲ್ಲಿ ಭಾಗವಹಿಸುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.