ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಂ ಜಿಲ್ಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ವೇಳೆ ಭಾರತೀಯ ಸೈನಿಕರು ಭಯೋತ್ಪಾದಕನೊಬ್ಬನಿಗೆ ಶರಣಾಗುವಂತೆ ಮನವೊಲಿಸುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
20ರ ಹರೆಯದ ಜಹಾಂಗೀರ್ ಭಟ್ ಎಂಬಾತ ಕೆಲವೇ ದಿನಗಳ ಹಿಂದೆ ಭಯೋತ್ಪಾದನೆಗೆ ಸೇರಿಕೊಂಡಿದ್ದ. ಈತನನ್ನು ಭದ್ರತಾಪಡೆಗಳು ಪತ್ತೆಹಚ್ಚಿವೆ ಮತ್ತು ಆತನ ಬಳಿ ಇದ್ದ ಎಕೆ-47 ರೈಫಲ್ ಅನ್ನು ವಶಪಡಿಸಿಕೊಂಡಿವೆ.
ಆತನನ್ನು ಶರಣಾಗುವಂತೆ ಯೋಧರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗೆಗಿನ ವಿಡಿಯೋವೊಂದನ್ನು ಸೇನೆ ರಿಲೀಸ್ ಮಾಡಿದ್ದು, ಇದರಲ್ಲಿ ಸೈನಿಕರು ಆತನ ಮನವೊಲಿಸುತ್ತಿರುವ ದೃಶ್ಯ ಇದೆ.
“ನೀನು ಸುರಕ್ಷಿತವಾಗಿದ್ದೀಯ, ದೇವರ ಸಲುವಾಗಿ ನಿನ್ನ ಕುಟುಂಬದ ಸಲುವಾಗಿ ಶರಣಾಗು” ಎಂದು ಯೋಧರೊಬ್ಬರು ಆತನಿಗೆ ಹೇಳುತ್ತಿರುವ ಮಾತುಗಳನ್ನು ಈ ವಿಡಿಯೋದಲ್ಲಿ ಕೇಳಬಹುದು. “ನೀನು ಹೆದರಬೇಡ ಮಗು, ಇಲ್ಲಿ ಯಾರು ನಿನಗೆ ಗುಂಡೇಟು ಹೊಡೆಯುವುದಿಲ್ಲ” ಎಂದು ಆತನ ಮನವೊಲಿಸಿದ್ದಾರೆ. ಆತನಿಗೆ ನೀರನ್ನು ಕೂಡ ತಂದುಕೊಟ್ಟಿದ್ದಾರೆ.
ಭಾರತೀಯ ಸೇನೆಯು ಜಗತ್ತಿನ ಅತ್ಯಂತ ಮಾನವೀಯ ಸೇನೆ ಎನಿಸಿಕೊಂಡಿದೆ. ಸಮಾಜದ ಮುಖ್ಯವಾಹಿನಿಗೆ ಬರುವ ಪ್ರತಿಯೊಬ್ಬರಿಗೂ ಅದು ಬದುಕುವ ಹಕ್ಕನ್ನು ಕಲ್ಪಿಸುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
One SPO went missing with two AK-47 on 13 Oct 20. Same day, Jahangir Ah Bhat (31 yr old shopkeeper) from Chadoora had gone missing too. Today, he was apprehended with one AK rifle.#Kashmir https://t.co/D2p2WmHqal pic.twitter.com/44YdqxGTSe
— Chinar Corps🍁 – Indian Army (@ChinarcorpsIA) October 16, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.