ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಸುಮಾರು 19 ನದಿಗಳ ಪುನರುಜ್ಜೀವನಕ್ಕಾಗಿ ಕೆಲಸ ಮಾಡುತ್ತಿದೆ. ಇವುಗಳಲ್ಲಿ ಬಹುತೇಕ ನದಿಗಳು ಸತ್ತೇ ಹೋಗಿವೆ ಅಥವಾ ಅಳಿವಿನಂಚಿನಲ್ಲಿವೆ ಎಂದು ಹೇಳಬಹುದು.
ಪೌರಾಣಿಕವಾಗಿ ಮಹತ್ವವನ್ನು ಹೊಂದಿರುವ ಎರಡು ನದಿಗಳಾದ ಮಂದಾಕಿನಿ ಮತ್ತು ತಾಮ್ಸಾ ನದಿಗಳನ್ನು ಈಗಾಗಲೇ ಪುನರುಜ್ಜೀವನ ಮಾಡಲಾಗಿದೆ, ಉಳಿದ 17 ನದಿಗಳ ಪುನಃಶ್ಚೇತನದ ಕಾಮಗಾರಿ ನಡೆಯುತ್ತಿದೆ.
ಈ ನದಿಗಳಲ್ಲಿ ತೆಧಿ, ಮನೋರಮಾ, ಪಾಂಡು, ವರುಣ, ಸಸೂರ್ ಖಾದೇಡಿ, ಸಾಯಿ, ಅರಿಲ್, ಮೊರ್ವಾ, ನಾಡ್, ಕರ್ಣಾವತಿ, ಬಾನ್, ಸೋಟ್, ಕಾಳಿ ಪೂರ್ವಿ, ದಾದಿ, ಇಶಾನ್, ಬೋಧಿ ಗಂಗಾ ಮತ್ತು ಗೋಮತಿ ನದಿಗಳು ಸೇರಿವೆ.
ಯೋಗಿ ಪ್ರಕಾರ, “ಪ್ರತಿಯೊಂದು ನದಿ ಅಥವಾ ನೀರಿನ ಮೂಲವು ತನ್ನದೇ ಆದ ಜೈವಿಕ ವೈವಿಧ್ಯತೆಯನ್ನು ಹೊಂದಿದೆ ಮತ್ತು ಪರಿಸರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಇದು ಬಹಳ ಅವಶ್ಯಕವಾಗಿದೆ. ಒಂದು ನದಿ ತನ್ನ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಹರಿಯುತ್ತಿದ್ದರೆ, ಅದು ಅಲ್ಲಿನ ಜನ ಸಮೂಹಕ್ಕೆ ಒಂದು ವರದಾನವಾಗುತ್ತದೆ”.
“ನದಿ ಅದರ ಸುತ್ತಲಿನ ಭೂ ದ್ರವ್ಯರಾಶಿಗಳ ನೀರಿನ ಮಟ್ಟವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ಇದು ಸಾವಿರಾರು ಜನರ ಜೀವನೋಪಾಯಕ್ಕೂ ಸಹಕಾರಿಯಾಗಿದೆ. ನದಿಯೊಂದರ ಸಾವು ಅನೇಕ ಪ್ರಯೋಜನಗಳನ್ನು ಕಸಿದುಕೊಳ್ಳುತ್ತದೆ ಮತ್ತು ಆರೋಗ್ಯಕರ ಮತ್ತು ಸಮೃದ್ಧ ಪೀಳಿಗೆಗೆ ನದಿಗಳನ್ನು ಹೊಂದಿರುವುದು ಬಹಳ ಮುಖ್ಯ” ಎಂದು ಯೋಗಿ ಹೇಳುತ್ತಾರೆ.
ಪುನರುಜ್ಜೀವನ ಕಂಡ ನದಿಗಳಲ್ಲಿ ಒಂದಾದ ಮಂದಾಕಿನಿ ಕೂಡ ರಾಮಾಯಣ ಮಹಾಕಾವ್ಯದಲ್ಲಿ ಉಲ್ಲೇಖವನ್ನು ಕಂಡುಕೊಂಡಿದೆ. ಅಲ್ಲಿ ಭಗವಾನ್ ರಾಮ್, ಸೀತಾ ಮತ್ತು ಲಕ್ಷ್ಮಣರು ತಮ್ಮ ವನವಾಸದ ಹೆಚ್ಚಿನ ಸಮಯವನ್ನು ಚಿತ್ರಕೂಟಿನ ದಂಡೆಯಲ್ಲಿ ಕಳೆದರು ಎಂದು ಹೇಳಲಾಗುತ್ತದೆ.
ನಗರದ ಜೀವಸೆಲೆ ಎಂದು ಕರೆಯಲ್ಪಡುವ ಈ ಪವಿತ್ರ ಸ್ಥಳದ ದಡದಲ್ಲಿ ತುಳಸಿದಾಸ್ ರಾಮಾಯಣವನ್ನು ಬರೆದಿದ್ದಾರೆ. ನದಿ ಬಹುತೇಕ ಕಣ್ಮರೆಯಾಗಿ ನಾಲ್ಕು ದಶಕಗಳೇ ಆಗಿವೆ. ಮಂದಾಕಿನಿ ಈಗ ನೀರಿನಿಂದ ತುಂಬಿದೆ.
ಪುನರುಜ್ಜೀವನ ಕಂಡ ಮತ್ತೊಂದು ನದಿ ತಮ್ಸಾ ನದಿ. ನಂಬಿಕೆಗಳ ಪ್ರಕಾರ, ಭಗವಾನ್ ರಾಮ, ಸೀತಾ ಮತ್ತು ಲಕ್ಷ್ಮಣರು ಅಯೋಧ್ಯೆಯನ್ನು ಬಿಟ್ಟು ವನವಾಸಕ್ಕೆ ಬಂದಾಗ ಮೊದಲ ದಿನವನ್ನು ತಮ್ಸಾ ದಡದಲ್ಲಿ ಕಳೆದರು ಎಂಬ ಪ್ರತೀತಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.