ನವದೆಹಲಿ: ಕರ್ನಾಟಕ ರಾಜ್ಯದ ವಕ್ಫ್ ಆಸ್ತಿ ಹಗರಣಕ್ಕೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜ್ಯದ ಅಲ್ಪಸಂಖ್ಯಾತ ಆಯೋಗ ಸಲ್ಲಿಸಿದ್ದ ಅಧ್ಯಯನ ವರದಿಯನ್ನು ಎಂಟು ವರ್ಷಗಳ ಬಳಿಕ ಇದೀಗ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ.
ಈ ಸಂಬಂಧ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ, ಸಂಸದ ರಾಜೀವ್ ಚಂದ್ರಶೇಖರ್ ಅವರು, ಕರ್ನಾಟಕದ ಪ್ರತಿಪಕ್ಷಗಳು ಬಡ ಮುಸ್ಲಿಮರಿಗಾಗಿ ಇದ್ದ ವಕ್ಫ್ ಭೂಮಿಯನ್ನು ಲೂಟಿ ಮಾಡಿರುವುದಾಗಿ ತಿಳಿಸಿದ್ದಾರೆ. ಸುಮಾರು 29,000 ಎಕರೆಗಳಿಗೂ ಅಧಿಕ ಪ್ರಮಾಣದ ವಕ್ಫ್ ಭೂಮಿಯನ್ನು ರಹಸ್ಯವಾಗಿ ಮತ್ತು ಕಾನೂನು ಬಾಹಿರವಾಗಿ ಪ್ರತಿಪಕ್ಷಗಳು ವಾಣಿಜ್ಯ ಚಟುವಟಿಕೆಗಾಗಿ ವರ್ಗಾಯಿಸಿವೆ. ಈ ವರದಿ 2012 ರಲ್ಲಿಯೇ ತಯಾರಾಗಿದೆ. ಆದರೂ ಆಗಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಎಂಟು ವರ್ಷ ಆಡಳಿತ ನಡೆಸುತ್ತಿದ್ದ ಎರಡು ಜಾತ್ಯಾತೀತರು ಎಂದು ಬಿಂಬಿಸಿಕೊಳ್ಳುತ್ತಿದ್ದ ಸರ್ಕಾರದ ಮುಖ್ಯಮಂತ್ರಿಗಳು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದ ವಕ್ಫ್ ಮಂಡಳಿ ಸುಮಾರು 54 ಸಾವಿರ ಎಕರೆ ಭೂಮಿಯನ್ನು ಹೊಂದಿದೆ. ಆದರೆ ಅದರಲ್ಲಿ 29 ಸಾವಿರ ಎಕರೆಯನ್ನು ಕಾನೂನು ಬಾಹಿರವಾಗಿ ಬಳಕೆ ಮಾಡಲಾಗಿದೆ. ಈ ಅಕ್ರಮದಲ್ಲಿ ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಸಿ ಎಂ ಇಬ್ರಾಹಿಂ ಮೊದಲಾದ ನಾಯಕರು ಶಾಮೀಲಾಗಿದ್ದಾರೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ. ಕರ್ನಾಟಕದಂತೆಯೇ ಇತರ ರಾಜ್ಯಗಳಲ್ಲಿಯೂ ವಕ್ಫ್ ಭೂ ಅಕ್ರಮಗಳ ತನಿಖೆ ನಡೆಯಬೇಕಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
कर्नाटक माइनॉरिटीज कमीशन की एक रिपोर्ट जो 2012 में तैयार हुई और सितंबर 2020 में ये एसेंबली में आया था। उसके बाद इस रिपोर्ट को दबाकर रखा गया। आज इस रिपोर्ट को लोगों के सामने लाया गया है। इसे की लीगली चैलेंज नहीं किया गया: श्री @rajeev_mp pic.twitter.com/jLAblVHg6K
— BJP (@BJP4India) October 15, 2020
LIVE: Press Conference by Shri @rajeev_mp at BJP HQ, New Delhi.https://t.co/IycBI0o2eA
— BJP (@BJP4India) October 15, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.