ನವದೆಹಲಿ: ಭಾರತ ಮತ್ತು ಮಾಯನ್ಮಾರ್ ನಡುವೆ ಬಾಂಧವ್ಯ ಮತ್ತಷ್ಟು ವೃದ್ಧಿಯಾಗುತ್ತಿದೆ. ಭಾರತವು ಇದೇ ಮೊದಲ ಬಾರಿಗೆ ಮಯನ್ಮಾರ್ ನೌಕಾಪಡೆಗೆ ಜಲಾಂತರ್ಗಾಮಿ ನೌಕೆಯನ್ನು ಒದಗಿಸಲಿದೆ. ಕಿಲೋ ಕ್ಲಾಸ್ ಸಬ್ಮರಿನ್ ಐಎನ್ಎಸ್ ಸಿಂಧುವೀರ್ ಅನ್ನು ಭಾರತ ಮಯನ್ಮಾರ್ಗೆ ಹಸ್ತಾಂತರ ಮಾಡಲಿದೆ.
ಇದನ್ನು ಅತ್ಯಾಧುನಿಕ ಪ್ಯಾಕೇಜ್ ಎಂದು ವಿವರಿಸಿರುವ ಸರ್ಕಾರದ ಮೂಲಗಳು, ವಿದೇಶಿ ಸಹಕಾರದ ನಿರ್ಮಾಣ ಮತ್ತು ಸಂಯೋಜನೆಯ ನಿಟ್ಟಿನಲ್ಲಿ ಇದೊಂದು ಮಹತ್ವಪೂರ್ಣವಾದ ಹೆಜ್ಜೆ ಎಂದು ಬಣ್ಣಿಸಿದೆ.
“ಕಡಲ ವಲಯದಲ್ಲಿನ ಸಹಕಾರವು ಮಯನ್ಮಾರ್ ನೊಂದಿಗಿನ ನಮ್ಮ ವೈವಿಧ್ಯಮಯ ಮತ್ತು ವರ್ಧಿತ ತೊಡಗಿಸಿಕೊಳ್ಳುವಿಕೆಯ ಒಂದು ಭಾಗವಾಗಿದೆ. ಭಾರತವು ಮಯನ್ಮಾರ್ ಪಡೆಗೆ ಜಲಾಂತರ್ಗಾಮಿ ಐಎನ್ಎಸ್ ಸಿಂಧು ವೀರ್ ಅನ್ನು ತಲುಪಿಸಲಿದೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಅವರು ವಿವರಿಸಿದ್ದಾರೆ.
“ಇದು ಸಾಗರ ಭದ್ರತೆ ಮತ್ತು ಈ ಪ್ರದೇಶದ ಎಲ್ಲರಿಗೂ ಬೆಳವಣಿಗೆ ಮತ್ತು ನಮ್ಮ ನೆರೆಹೊರೆಯ ರಾಷ್ಟ್ರಗಳ ಸಾಮರ್ಥ್ಯ ಮತ್ತು ಸ್ವಾವಲಂಬನೆಯನ್ನು ನಿರ್ಮಿಸುವ ನಮ್ಮ ಬದ್ಧತೆಗೆ ಅನುಗುಣವಾಗಿದೆ” ಎಂದು ಅವರು ಹೇಳಿದ್ದಾರೆ.
ಕಿಲೋ ವರ್ಗದ ಜಲಾಂತರ್ಗಾಮಿ ನೌಕೆ 3,000 ಟನ್ ಡಿಸ್ಪ್ಲೇಸ್ಮೆಂಟ್, 74 ಮೀಟರ್ ಉದ್ದ ಮತ್ತು 10 ಮೀಟರ್ ಬೀಮ್ ಅನ್ನು ಹೊಂದಿದೆ. ಇದನ್ನು 15 ಅಧಿಕಾರಿಗಳು ಮತ್ತು 60 ನಾವಿಕರು ನಿರ್ವಹಿಸುತ್ತಿದ್ದಾರೆ. ಶಸ್ತ್ರಾಸ್ತ್ರಗಳು ಮತ್ತು ಸೆನ್ಸಾರ್ಗಳನ್ನು ಇದು ಹೊಂದಿದ್ದು, ಜಲಾಂತರ್ಗಾಮಿ ನೌಕೆಯು ವಿವಿಧ ಫ್ಲೀಟ್, ಯುದ್ಧತಂತ್ರದ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಶಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.