ತೆಲಂಗಾಣ: ಚಾಮರಾಜನಗರದ ಸಾರನಾಥ ಬೌದ್ಧ ವಿಹಾರದಲ್ಲಿ ತೆಲಂಗಾಣ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬರು ಬೌದ್ಧ ಬಿಕ್ಕುವಾಗಿ ದೀಕ್ಷೆ ಸ್ವೀಕರಿಸಿದ್ದಾರೆ.
ಹೈದರಾಬಾದ್ ಮೂಲದ ನಲವತ್ತು ವರ್ಷದ ಶಹನವಾಜ್ ವಾಲಿ ಎಂಬವರೇ ಇಸ್ಲಾಂ ಧರ್ಮ ತೊರೆದು ಬೌದ್ಧ ಧರ್ಮ ಸ್ವೀಕರಿಸಿದ್ದಾರೆ. ಡಾ. ಬಿ ಆರ್ ಅಂಬೇಡ್ಕರ್ ಅವರಿಂದ ಪ್ರೇರಣೆ ಪಡೆದು ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದ ಅಕ್ಟೋಬರ್ 14 ರಂದೇ ತಾವೂ ಬೌದ್ಧ ದೀಕ್ಷೆ ಪಡೆದಿದ್ದಾರೆ. ನಳಂದಾ ವಿವಿಯ ಬೋಧಿದತ್ತ ಬಂತೇಜಿ ಸನ್ಯಾಸ ದೀಕ್ಷೆ ಬೋಧಿಸಿದ್ದಾರೆ. ಆ ಬಳಿಕ ಶಹನವಾಜ್ ಅವರಿಗೆ ಬಂತೇ ಧಮ್ಮ ಕ್ರಾಂತಿ ಎಂದು ನಾಮಕರಣ ಮಾಡಲಾಗಿದೆ.
ದೀಕ್ಷೆ ಪಡೆದ ಬಳಿಕ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದಲೂ ಬೌದ್ಧ ಧರ್ಮ ಅಧ್ಯಯನ ಮಾಡಿದ್ದೇನೆ. ಕಳೆದ 5 ವರ್ಷದ ಹಿಂದೆ ನಾಗಪುರದಲ್ಲಿ ಅಂಬೇಡ್ಕರ್ ಅವರ ಧಮ್ಮ ದೀಕ್ಷೆ ಪಡೆದ ಸ್ಥಳಕ್ಕೆ ಭೇಟಿ ನೀಡಿದ್ದೆ. ಬುದ್ಧನ ಸಂದೇಶಗಳು ನನ್ನನ್ನು ಬೌದ್ಧ ಧರ್ಮದ ಕಡೆ ವಾಲುವಂತೆ ಮಾಡಿತು. 2015 ರಿಂದಲೇ ನನ್ನಲ್ಲಿ ಏನೋ ಬದಲಾವಣೆ ಆರಂಭವಾಯಿತು. ಶಾಂತಿಯನ್ನು ಬಯಸಿ ತಾನು ಬೌದ್ಧ ಧರ್ಮ ಅನುಯಾಯಿಯಾಗಿದ್ದೇನೆ ಎಂದು ಹೇಳಿದ್ದಾರೆ.
ತನಗೆ ಎಲ್ಲಾ ಧರ್ಮಗಳ ಮೇಲೂ ಗೌರವವಿದೆ. ನನ್ನ ಈ ನಿಲುವಿಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಬಹುದು. ಆದರೆ ನನ್ನ ಈ ನಿರ್ಧಾರ ಅಚಲವಾಗಿದೆ ಎಂದೂ ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.