ಪುಣೆ: ದತ್ತೋಪಂತ ಠೇಂಗಡಿ ಅವರ ಸಾಮಾಜಿಕ ಸಾಮರಸ್ಯದ ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ, ಆ ದೂರದೃಷ್ಟಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮನವಿ ಮಾಡಿದ್ದಾರೆ.
ದತ್ತೋಪಂತ ಠೇಂಗಡಿ ಜನ್ಮಶತಾಬ್ದಿ ಸಮಾರಂಭದ ಪ್ರಯುಕ್ತ ‘ಠೇಂಗಡಿ ಅವರ ದೂರದೃಷ್ಟಿಯಲ್ಲಿ ಸಾಮಾಜಿಕ ಸಾಮರಸ್ಯ’ ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ದತ್ತೋಪಂತ ಠೇಂಗಡಿ ಜನ್ಮಶತಾಬ್ದಿ ಸಮಾರಂಭ ಸಮಿತಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು.
ಸಮಾಜದಿಂದ ತಾರತಮ್ಯ ಮತ್ತು ಅಸಮಾನತೆಯನ್ನು ನಿರ್ಮೂಲನೆ ಮಾಡಲು ಠೇಂಗಡಿ ಅವರು ತಮ್ಮ ಇಡೀ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರು ಉತ್ತಮ ಶಿಕ್ಷಿತನಾಗಿದ್ದರು ಮತ್ತು ರಾಜಕೀಯ ಲಾಭವನ್ನು ಪರಿಗಣಿಸದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದರು ಎಂದು ಭಾಗವತ್ ತಮ್ಮ ಉಪನ್ಯಾಸದಲ್ಲಿ ಹೇಳಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂವರು ಸರಸಂಘಚಾಲಕರಾದ ಡಾ. ಹೆಡ್ಗೆವಾರ್, ಶ್ರೀ ಗುರೂಜಿ ಮತ್ತು ಶ್ರೀ ಬಾಳಾಸಾಹೇಬ್ ದೇವರಸ್ ಅವರಿಗೆ ಠೇಂಗಡಿ ನಿಕಟರಾಗಿದ್ದರು. ಇವರೆಲ್ಲರು ಹಿಂದೂ ಬಲವರ್ಧನೆಯು ಅಸಮಾನತೆ ಮತ್ತು ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಇರುವ ಸರಿಯಾದ ಮಾರ್ಗ ಎಂದು ಪರಿಗಣಿಸಿದ್ದರು. ಹಿಂದೂಗಳನ್ನು ಒಗ್ಗೂಡಿಸುವುದು ಮತ್ತು ತಾರತಮ್ಯವನ್ನು ನಿರ್ಮೂಲನೆ ಮಾಡುವುದು ಒಂದೇ ನಾಣ್ಯದ ಎರಡು ಮುಖಗಳು ಎಂಬುದನ್ನು ಠೇಂಗಡಿ ನಂಬಿದ್ದರು ಎಂದು ಭಾಗವತ್ ಹೇಳಿದ್ದಾರೆ.
ಡಾ. ಬಾಳ ಸಾಹೇಬ್ ಅಂಬೇಡ್ಕರ್ ಅವರಿಗೆ ಠೇಂಗಡೆ ಆಪ್ತರಾಗಿದ್ದರು ಮತ್ತು ಆ ಮಹಾನ್ ವ್ಯಕ್ತಿತ್ವವನ್ನು ಅವರು ಅಂತರಂಗದಿಂದ ಅರ್ಥಮಾಡಿಕೊಂಡಿದ್ದರು. ಇಹಲೋಕ ತ್ಯಜಿಸುವುದಕ್ಕೆ ಕೆಲವೇ ಸಮಯ ಮುಂಚಿತವಾಗಿ ಅವರು ಬರೆದ ಪುಸ್ತಕ ಅಂಬೇಡ್ಕರ್ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಸಂಬಂಧಿಸಿದ್ದಾಗಿತ್ತು. ಪುಸ್ತಕವು ಅವರ ಮರಣದ ನಂತರ ಪುಣೆಯಲ್ಲಿ ಬಿಡುಗಡೆಗೊಂಡಿತ್ತು. ಹೀಗಾಗಿ ಅವರ ಪುಣ್ಯತಿಥಿಯನ್ನು ‘ಸಾಮಾಜಿಕ ಸಾಮರಸತ ದಿವಸ್’ ಎಂದು ಆಚರಿಸಲಾಗುತ್ತದೆ ಎಂದು ಭಾಗವತ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.