ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಕೇಂದ್ರ ಸರ್ಕಾರದ ಚಿತ್ತ ಹರಿಸಿದೆ. ಪ್ರಸ್ತುತ ಅಲ್ಲಿ ಜೊಜಿಲಾ ಸುರಂಗವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಸುರಂಗಕ್ಕೆ ಇಂದು ಬಂಡೆಯನ್ನು ಸ್ಪೋಟಿಸುವ ಕಾರ್ಯವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನೆರವೇರಿಸಿದ್ದಾರೆ.
ಈ ಸುರಂಗವು ಎನ್ಎಚ್ -1 ರಲ್ಲಿ ಶ್ರೀನಗರ ಕಣಿವೆ ಮತ್ತು ಲೇಹ್ ನಡುವೆ ಸರ್ವ ಋತು ಸಂಪರ್ಕವನ್ನು ಒದಗಿಸುತ್ತದೆ. ಅಲ್ಲದೇ, ಜಮ್ಮು ಮತ್ತು ಕಾಶ್ಮೀರದ ಸರ್ವತೋಮುಖ ಆರ್ಥಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಏಳಿಗೆಗೆ ಪ್ರಯೋಜನಕಾರಿಯಾಗಲಿದೆ.
ಈ ಯೋಜನೆಯು ಜೊಜಿಲಾ ಪಾಸ್ ಅಡಿಯಲ್ಲಿ ಸುಮಾರು 3,000 ಮೀಟರ್ ಎತ್ತರದಲ್ಲಿ 14.15 ಕಿಲೋಮೀಟರ್ ಉದ್ದದ ಸುರಂಗವನ್ನು ನಿರ್ಮಾಣವನ್ನ ಒಳಗೊಂಡಿದೆ. ಪ್ರಸ್ತುತ ಶ್ರೀನಗರ ಮತ್ತು ಲೇಹ್ ಅನ್ನು ದ್ರಾಸ್ ಮತ್ತು ಕಾರ್ಗಿಲ್ ಮೂಲಕ ಸಂಪರ್ಕಿಸುವ ಎನ್ಎಚ್ -1 ನಲ್ಲಿ ಕೇವಲ 6 ತಿಂಗಳುಗಳವರೆಗೆ ಮಾತ್ರ ಪ್ರಯಾಣಿಸಬಹುದು, ಮತ್ತೆ ಆರು ತಿಂಗಳು ಇಲ್ಲಿ ಸಂಚಾರ ಸ್ಥಗಿತಗೊಂಡಿರುತ್ತದೆ. ವಾಹನವನ್ನು ಓಡಿಸಲು ಇದು ವಿಶ್ವದ ಅತ್ಯಂತ ಅಪಾಯಕಾರಿ ಮಾರ್ಗ ಎಂದೆನಿಸಿಕೊಂಡಿದೆ.
ಜೋಜಿಲಾ ಸುರಂಗದ ನಿರ್ಮಾಣ ವೆಚ್ಚ ಈ ಹಿಂದೆ 6,575.85 ಕೋಟಿ ರೂ.ಗಳಷ್ಟು ಎಂದು ಅಂದಾಜಿಸಲಾಗಿತ್ತು. ಅದರೆ ವಾರ್ಷಿಕ 5% ಹೆಚ್ಚಳ ಪರಿಗಣಿಸಿ ಯೋಜನೆಯ ಒಟ್ಟು ಬಂಡವಾಳ ವೆಚ್ಚವನ್ನು 8,308 ಕೋಟಿ ರೂ.ಎಂದು ನಿಗದಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.