ಅಹಮದಾಬಾದ್: ಹಿಂದೂ ಮತ್ತು ಮುಸ್ಲಿಂ ವಿವಾಹ ಸಂಬಂಧದ ಬಗ್ಗೆ ಜಾಹೀರಾತನ್ನು ಪ್ರಕಟಿಸಿರುವ ಖ್ಯಾತ ಜುವೆಲ್ಲರಿ ಬ್ರ್ಯಾಂಡ್ ತನಿಷ್ಕ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜಾಹೀರಾತನ್ನು ಹಿಂಪಡೆದ ಬಳಿಕವೂ ತನಿಷ್ಕ್ ಮೇಲಿನ ಜನರ ಆಕ್ರೋಶ ತಣ್ಣಗಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ತನಿಷ್ಕ್ ಜಾಹೀರಾತಿನ ವಿಷಯವೇ ಹರಿದಾಡುತ್ತಿದೆ.
ಇನ್ನೊಂದೆಡೆ ದೇಶದ ಪ್ರತಿಷ್ಠಿತ ಸುದ್ದಿಸಂಸ್ಥೆ ಎನಿಸಿಕೊಂಡಿರುವ ಎನ್ಡಿಟಿವಿ ಈ ವಿಷಯದಲ್ಲಿ ಮತ್ತೊಮ್ಮೆ ತನ್ನ ಗುಜರಾತ್ ವಿರೋಧಿ ಧೋರಣೆಯನ್ನು ಪ್ರದರ್ಶನ ಮಾಡಿದೆ. ಗಾಂಧಿನಗರದಲ್ಲಿನ ತನಿಷ್ಕ್ ಸ್ಟೋರ್ ಮೇಲೆ ಗುಂಪು ಹಲ್ಲೆ ನಡೆಸಲಾಗಿದೆ ಮತ್ತು ಒತ್ತಾಯಪೂರ್ವಕವಾಗಿ ಕ್ಷಮಾಪಣ ಪತ್ರವನ್ನು ಬರೆಸಲಾಗಿದೆ ಎಂದು ಎನ್ಡಿಟಿವಿ ಟ್ವೀಟ್ ಮಾಡಿದೆ. ಇಂಡಿಯನ್ ಎಕ್ಸ್ಪ್ರೆಸ್ ಮಾಧ್ಯಮ ಕೂಡ ಇದೇ ರೀತಿಯ ವರದಿಯನ್ನು ಮಾಡಿದೆ.
ಆದರೆ ಈ ವರದಿಯನ್ನು ಗುಜರಾತ್ ಪೊಲೀಸರು ಅಲ್ಲಗೆಳೆದಿದ್ದಾರೆ. ತನಿಷ್ಕ್ ಮಳಿಗೆ ಮೇಲೆ ಯಾವುದೇ ರೀತಿಯ ದಾಳಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ತನಿಷ್ಕ್ ಮಳಿಗೆಗೆ ಭೇಟಿ ನೀಡಿ ಸಿಬ್ಬಂದಿಗಳನ್ನು ವಿಚಾರಿಸಿದ್ದಾರೆ. ಆದರೆ ಯಾವುದೇ ದಾಳಿ ನಡೆದ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಎಸ್ಪಿ ಮಯೂರ್ ಪಟೇಲ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಅಕ್ಟೋಬರ್ 12ರಂದು ಇಬ್ಬರು ವ್ಯಕ್ತಿಗಳು ಮಳಿಗೆಗೆ ಭೇಟಿ ನೀಡಿದ್ದರು. ಲವ್ ಜಿಹಾದ್ ಬಗ್ಗೆ ಮಾಡಿರುವ ಜಾಹೀರಾತಿಗೆ ಕ್ಷಮಾಪಣೆ ಕೇಳುವಂತೆ ಒತ್ತಾಯಿಸಿದ್ದರು. ಅವರ ಮಾತಿಗೆ ಒಪ್ಪಿಕೊಂಡು ಮಳಿಗೆಯ ಮಾಲೀಕ ಕ್ಷಮಾಪಣಾ ಪತ್ರ ಬರೆದಿದ್ದಾನೆ. ಆದರೆ ಇದು ಗುಂಪು ದಾಳಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
On Oct 12, two people came to #Tanishq store in Gandhidham & demanded to put up an apology in Gujarati. The shop owner had fulfilled the demand but he was getting threat calls from Kutch. The news about the store being attacked are false: Mayur Patil, SP, Kutch (East), Gujarat pic.twitter.com/7BYQJn4Akd
— ANI (@ANI) October 14, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.