ಮುಂಬಯಿ: ಕೇಂದ್ರ ಸರಕಾರ ದೇಗುಲಗಳನ್ನು ತೆರೆಯಲು ಅನುವು ಮಾಡಿಕೊಟ್ಟಿದ್ದರೂ ಕೂಡ ಮಹಾರಾಷ್ಟ್ರದಲ್ಲಿ ದೇಗುಲಗಳ ಬಾಗಿಲುಗಳನ್ನು ಇನ್ನೂ ಕೂಡ ತೆರೆಯಲಾಗಿಲ್ಲ. ಮಹಾರಾಷ್ಟ್ರ ಸರಕಾರದ ಈ ಧೋರಣೆಯನ್ನು ಖಂಡಿಸಿ ಪ್ರಸಿದ್ಧ ಶಿರ್ಡಿ ಸಾಯಿಬಾಬಾ ಮಂದಿರದ ಅರ್ಚಕರು ಪ್ರತಿಭಟನೆಯನ್ನು ನಡೆಸಿದ್ದಾರೆ. ಮಾತ್ರವಲ್ಲ ಉಪವಾಸ ಸತ್ಯಾಗ್ರಹವನ್ನು ಕೂಡ ನಡೆಸುತ್ತಿದ್ದಾರೆ.
ದೇಶದಾದ್ಯಂತದ ದೇಗುಲಗಳು ತೆರೆದಿವೆ. ಆದರೆ ಉದ್ಧವ್ ಠಾಕ್ರೆ ಅವರ ಸರಕಾರ ಯಾಕೆ ಸಾಧುಗಳ ಮತ್ತು ಹಿಂದುಗಳ ಮೇಲೆ ಇಷ್ಟೊಂದು ದ್ವೇಷವನ್ನು ಸಾಧಿಸುತ್ತಿದೆ. ಯಾಕೆ ಇನ್ನೂ ದೇಗುಲಗಳ ಬಾಗಿಲುಗಳನ್ನು ತೆರೆಯುತ್ತಿಲ್ಲ ಎಂದು ಪ್ರತಿಭಟನಾನಿರತ ಅರ್ಚಕರು ಪ್ರಶ್ನಿಸಿದ್ದಾರೆ.
ದೇಗುಲದ ಬಾಗಿಲನ್ನು ತೆರೆಯುವಂತೆ ನಾವು ಮಹಾರಾಷ್ಟ್ರದಾದ್ಯಂತ ಗಂಟೆ ನಾದ ಚಳುವಳಿಯನ್ನು ನಡೆಸಿದ್ದೇವೆ, ರಾಜ್ಯಪಾಲರನ್ನು ಕೂಡ ಹಲವು ಬಾರಿ ಭೇಟಿಯಾಗಿದ್ದೇವೆ. ಆದರೆ ಮೂಗ ಮತ್ತು ಕಿವುಡ ಸರಕಾರ ಯಾವುದನ್ನು ಕೂಡ ಅರ್ಥಮಾಡಿಕೊಳ್ಳದೆ, ಅರ್ಚಕರ ಭಾವನೆಗಳ ಜೊತೆ ಆಟವಾಡುತ್ತಿದೆ. ಸಂತರ ನಾಡಾದ ಮಹಾರಾಷ್ಟ್ರದಲ್ಲಿ ಇಂದು ಸಾಧುಗಳ ಹತ್ಯೆ ನಡೆಯುತ್ತಿದೆ ಎಂದು ಅರ್ಚಕರು ಆರೋಪಿಸಿದ್ದಾರೆ.
ಸರ್ಕಾರ ದೇಗುಲದ ಬಾಗಿಲನ್ನು ತೆರೆಯುವ ನಿರ್ಧಾರವನ್ನು ಶೀಘ್ರದಲ್ಲಿ ತೆಗೆದುಕೊಳ್ಳಬೇಕು. ಒಂದು ವೇಳೆ ಸರ್ಕಾರ ನಮ್ಮ ಬೇಡಿಕೆಯನ್ನು ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟವನ್ನು ನಡೆಸಲಿದ್ದೇವೆ ಎಂದು ಎಚ್ಚರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.