ಬೆಂಗಳೂರು: ನಾಗಪುರದಲ್ಲಿ ಇತ್ತೀಚೆಗೆ ನಡೆದ ಕೇಂದ್ರೀಯ ಕಾರ್ಯಕಾರಿಣಿ ಮಂಡಳಿಯ ಚುನಾವಣೆಯಲ್ಲಿ ಅಖಿಲ ಭಾರತೀಯ ವನವಾಸಿ ಕಲ್ಯಾಣಾಶ್ರಮದ ಅಧ್ಯಕ್ಷರಾಗಿ ರಾಜಸ್ಥಾನ ಮೂಲದ ರಾಮಚಂದ್ರ ಖರಾಡಿ ಆಯ್ಕೆಯಾಗಿದ್ದಾರೆ.
ಜಗ ದೇವರಾವ್ ಉರಾಂ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಕ್ಕೆ ಖರಾಡಿ ಆಯ್ಕೆಯಾಗಿದ್ದಾರೆ. ಇವರು ಪದವಿ ಶಿಕ್ಷಣ ಪಡೆದಿದ್ದು, ಬಳಿಕ ತಹಶೀಲ್ದಾರ್, ಸಹ ಜಿಲ್ಲಾಧಿಕಾರಿ ಮೊದಲಾದ ಹುದ್ದೆಗಳನ್ನು ನಿಭಾಯಿಸಿದವರಾಗಿದ್ದಾರೆ. 2014 ರಲ್ಲಿ ಸರ್ಕಾರಿ ಸೇವೆಯಿಂದ ಸ್ವ ನಿವೃತ್ತಿ ಪಡೆದು ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರಾಗಿದ್ದಾರೆ.
2003 ರಲ್ಲಿ ದುಂಗಾರ್ಪುರದಲ್ಲಿ ವಿದ್ಯಾರ್ಥಿ ನಿಲಯ ಕಟ್ಟಡದ ನಿರ್ಮಾಣ ಸಂದರ್ಭದಲ್ಲಿ ಇವರು ವನವಾಸಿ ಕಲ್ಯಾಣ ಪರಿಷತ್ನ ಸಂಪರ್ಕಕ್ಕೆ ಬಂದವರು. ಇವರು 2016 ರಲ್ಲಿ ಮತ್ತು 2019 ರಲ್ಲಿ ರಾಜಸ್ಥಾನ ವನವಾಸಿ ಕಲ್ಯಾಣ ಪರಿಷತ್ಗೆ ಅಧ್ಯಕ್ಷರಾಗಿ ಆಯ್ಕೆಯಾದವರು. 2017 ರಲ್ಲಿ ಖರಾಡಿ ಅವರಿಗೆ ಸಂತ ಈಶ್ವರ ಪುರಸ್ಕಾರವೂ ಲಭಿಸಿದೆ. ಇವರು 2015 ರಿಂದಲೂ ಪರಿಷತ್ನ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಕಲ್ಯಾಣಾಶ್ರಮದ ಉದ್ದೇಶ, ನಿಲುವುಗಳ ಬಗ್ಗೆ ಖಚಿತ ದೃಷ್ಟಿಕೋನ ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.