ಮೈಸೂರು: ನೈರುತ್ಯ ರೈಲ್ವೆಯ ಮುಖ್ಯ ರೈಲು ನಿಲ್ದಾಣಗಳ ವಿಭಾಗದಲ್ಲಿ 2019-20ನೇ ಸಾಲಿನ ಅತ್ಯುತ್ತಮ ನಿರ್ವಹಣೆಯ ನಿಲ್ದಾಣ ಎಂಬ ಪ್ರಶಸ್ತಿಗೆ ಮೈಸೂರು ರೈಲ್ವೆ ನಿಲ್ದಾಣ ಭಾಜನವಾಗಿದೆ.
ಹುಬ್ಬಳ್ಳಿಯ ನೈರುತ್ಯ ರೈಲ್ವೆಯ 65 ನೇ ವಾರಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿ ವಿತರಿಸಿ ಗೌರವಿಸಲಾಗಿದೆ. ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆಯ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಅವರು ಈ ಪ್ರಶಸ್ತಿಯನ್ನು ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣಾ ಗಾರ್ಗ್ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವ ಸಲ್ಲಿಸಿದ್ದಾರೆ.
2019-20 ನೇ ವರ್ಷದಲ್ಲಿ ರೈಲು ನಿಲ್ದಾಣದಲ್ಲಿ ಕೈಗೊಂಡ ಪ್ರಯಾಣಿಕ ಸ್ನೇಹಿ ಕ್ರಮಗಳ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮೈಸೂರು ರೈಲು ನಿಲ್ದಾಣವು ಕಟ್ಟಡದ ಪರಂಪರೆ, ಮೌಲ್ಯವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದಲೂ ಸಾಕಷ್ಟು ಕೆಲಸ ಮಾಡಿದ್ದು, ಈ ಕ್ರಮವನ್ನೂ ಗಣನೆಗೆ ತೆಗೆದುಕೊಂಡಿರುವ ನೈರುತ್ಯ ರೈಲ್ವೆ ಈ ಪ್ರಶಸ್ತಿ ನೀಡಿದೆ.
ಮೈಸೂರು ರೈಲು ನಿಲ್ದಾಣವು ಪ್ರಯಾಣಿಕರ ಸುರಕ್ಷತೆಗೆ, ಆರಾಮದಾಯಕ ಪ್ರಯಾಣಕ್ಕೆ, ಪ್ರಯಾಣಿಕರಿಗೆ ಕೈಗಟಕುವ ದರದಲ್ಲಿ ಪ್ರಯಾಣದ ಆನುಕೂಲತೆಗಳನ್ನು ಮಾಡಿಕೊಡುವ ಹಿನ್ನೆಲೆಯಲ್ಲಿಯೂ ಗಣನೀಯ ಸಾಧನೆ ಮಾಡಿದೆ. ಜೊತೆಗೆ ಹೆಚ್ಚಿನ ಉತ್ಪಾದಕತೆಗೆ ಸಂಬಂಧಿಸಿದಂತೆಯೂ ಸರಕು ರೈಲುಗಳ ಸಾಗಾಟದಲ್ಲಿಯೂ ಸಾಧನೆ ಮೆರೆದಿದೆ. ಹಾಗೆಯೇ ದಾಖಲೆಯ ಸಮಯದಲ್ಲಿ ಸಕಲೇಶಪುರ- ಸುಬ್ರಹ್ಮಣ್ಯ ಘಾಟಿಗಳಲ್ಲಿ ಸಿಗ್ನಲಿಂಗ್ ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ಧಿ ಮಾಡಿದೆ.
ಮೈಸೂರು ರೈಲ್ವೆ ವಿಭಾಗದ ಭದ್ರತಾ ವಿಭಾಗವೂ ಸಹ 2019-20 ನೇ ಸಾಲಿನಲ್ಲಿ ಹೆಚ್ಚು ದಕ್ಷತೆಯಿಂದ ಕಾರ್ಯ ನಿರ್ವಹಿಸುವ ವಿಭಾಗ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಮೈಸೂರು ಮತ್ತು ನಿಜಾಮುದ್ದೀನ್(ನವದೆಹಲಿ) ನಡುವೆ ಚಲಿಸುವ ಸ್ವರ್ಣ ಜಯಂತಿ ಸೂಪರ್ಫಾಸ್ಟ್ ವೀಕ್ಲಿ ರೈಲು ಸಹ ಮೈಸೂರಿನಲ್ಲಿ ಪ್ರಾಥಮಿಕ ನಿರ್ವಹಣೆಗೆ ಒಳಗಾಗಿದೆ. ಇದನ್ನು 2019 ನೇ ಸಾಲಿನಲ್ಲಿ ನೈರುತ್ಯ ರೈಲ್ವೆಯಲ್ಲಿ ಅತ್ಯುತ್ತಮವಾಗಿ ನಿರ್ವಹಣೆ ಮಾಡಲಾದ ರೇಕ್ ಎಂದು ಘೋಷಣೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.