ನವದೆಹಲಿ: ಕೇದಾರನಾಥ ದೇವಾಲಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ದೇಗುಲದ ಆವರಣದಲ್ಲಿ ನಿರ್ಮಾಣ ಕಾರ್ಯಗಳಿಗಾಗಿ ಶ್ರೀ ಕೇದಾರನಾಥ ಉತ್ತನ್ ಚಾರಿಟೇಬಲ್ ಟ್ರಸ್ಟ್ (ಎಸ್ಕೆಯುಸಿಟಿ) 120 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ ಎಂದು ವರದಿಗಳು ತಿಳಿಸಿವೆ.
ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ ದಿಲೀಪ್ ಜವಾಲ್ಕರ್ ನೀಡಿದ ಮಾಹಿತಿಯ ಪ್ರಕಾರ, ಕೇದಾರನಾಥ ಧಾಮದಲ್ಲಿ 50 ಅಡಿ ಅಗಲದ ಪಾದಾಚಾರಿ ಮಾರ್ಗ, ಭದ್ರತಾ ಗೋಡೆ ಮತ್ತು ಇತರ ಕಾಮಗಾರಿಗಳನ್ನು ಒಳಗೊಂಡಂತೆ ಎರಡನೇ ಹಂತದ ನಿರ್ಮಾಣ ಕಾರ್ಯಗಳು 120 ಕೋಟಿ ರೂ.ವೆಚ್ಚದಲ್ಲಿ ನಡೆಯಲಿದೆ.
ಕೇದಾರನಾಥ ಧಾಮದಲ್ಲಿ ಎಲ್ಲಾ ಮೂಲಸೌಕರ್ಯಗಳ ನಿರ್ಮಾಣ, ಪುನರ್ ನಿರ್ಮಾಣ, ಅಭಿವೃದ್ಧಿ, ಪುನರಾಭಿವೃದ್ಧಿ ಮತ್ತು ನವೀಕರಣಕ್ಕೆ ಅನುಕೂಲವಾಗುವ ಉದ್ದೇಶದಿಂದ 2017 ರಲ್ಲಿ ಉತ್ತರಾಖಂಡ ಸರ್ಕಾರವು ಎಸ್ಕೆಯುಸಿಯನ್ನು ರಚಿಸಿತು.
2013ರ ಪ್ರವಾಹದ ಬಳಿಕ ಕೇದಾರನಾಥ ದೇಗುಲದ ಸಮಗ್ರ ಪುನಃಶ್ಚೇತನವನ್ನು ಖಾತ್ರಿಪಡಿಸುವ ಉದ್ದೇಶದಿಂದ ಇದನ್ನು ರಾಜ್ಯ ಸರ್ಕಾರ ಸ್ಥಾಪಿಸಿತು. ಟ್ರಸ್ಟ್ ಸಾಂಸ್ಥಿಕ ಸಾಮಾಜಿಕ ಕಾರ್ಯದ ಅಡಿಯಲ್ಲಿ ಪುನರ್ನಿರ್ಮಾಣ ಕಾರ್ಯಗಳಿಗಾಗಿ ವಿವಿಧ ಪಿಎಸ್ಯುಗಳು ಮತ್ತು ಇತರ ಕಂಪನಿಗಳಿಂದ ಹಣವನ್ನು ಪಡೆಯುತ್ತದೆ.
ಸಮುದ್ರ ಮಟ್ಟದಿಂದ 11,657 ಅಡಿ ಎತ್ತರದಲ್ಲಿರುವ ಕೇದಾರನಾಥ್ ಹಿಂದೂಗಳ ಅತ್ಯಂತ ಸುಂದರವಾದ ಕ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.