ಮುಂಬೈ: ಮಹಾರಾಷ್ಟ್ರದಲ್ಲಿ ರೆಸ್ಟೋರೆಂಟ್, ಹೋಟೆಲ್, ಬಾರ್ ಮುಂತಾದವುಗಳು ತೆರೆದಿವೆ. ಆದರೆ ದೇಗುಲಗಳ ಬಾಗಿಲುಗಳನ್ನು ಇನ್ನೂ ತೆರೆಯಲಾಗಿಲ್ಲ. ಈ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಅಲ್ಲಿನ ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ
ಉದ್ಧವ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರು, “ಒಂದು ಕಡೆ ಬಾರ್, ರೆಸ್ಟೋರೆಂಟ್, ಬೀಚ್ ಮುಂತಾದವುಗಳನ್ನು ತೆರೆಯಲಾಗಿದೆ. ಇನ್ನೊಂದು ಕಡೆ ನಮ್ಮ ದೇವರುಗಳು ಇನ್ನೂ ಲಾಕ್ಡೌನ್ನಲ್ಲೇ ಇದ್ದಾರೆ. ಇದು ದುರದೃಷ್ಟಕರ” ಎಂದಿದ್ದಾರೆ.
“ನೀವು ಹಿಂದುತ್ವದ ಪ್ರತಿಪಾದಕ ಆಗಿದ್ದೀರಿ. ಮುಖ್ಯಮಂತ್ರಿಯಾದ ಕೂಡಲೇ ಅಯೋಧ್ಯೆಗೆ ತೆರಳಿ ರಾಮನಿಗೆ ನಿಮ್ಮ ಭಕ್ತಿಯನ್ನು ತೋರ್ಪಡಿಸಿದಿರಿ. ಆದರೆ ದೇಗುಲಗಳ ಬಾಗಿಲುಗಳನ್ನು ತೆರೆಯಲು ಯಾಕೆ ವಿಳಂಬ ಮಾಡುತ್ತಿದ್ದೀರಿ. ಒಂದು ಕಾಲದಲ್ಲಿ ನೀವು ವಿರೋಧಿಸುತ್ತಿದ್ದ ಪದ ‘ಸೆಕ್ಯೂಲರ್’. ಈಗ ನೀವು ಸೆಕ್ಯುಲರ್ ಆಗಿ ಬದಲಾಗಿದ್ದೀರಾ?”ಎಂದು ಪ್ರಶ್ನಿಸಿದ್ದಾರೆ.
ದೇಗುಲಗಳ ಬಾಗಿಲುಗಳನ್ನು ತೆರೆಯುವಂತೆ ಮಹಾರಾಷ್ಟ್ರದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಖ್ಯಾತ ಸಿದ್ಧಿವಿನಾಯಕ ದೇಗುಲದ ಬಾಗಿಲು ತೆರೆಯಬೇಕು ಎಂದು ಪ್ರತಿಭಟನೆಗಳನ್ನು ಕೂಡ ನಡೆಸಲಾಗಿದೆ. ಆದರೆ ಸಿಎಂ ಉದ್ಧವ ಠಾಕ್ರೆ ಮಾತ್ರ ಬಾಗಿಲುಗಳನ್ನು ತೆರೆಯುವ ಬಗ್ಗೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಅಲ್ಲಿನ ಜನರಿಗೆ ಬೇಸರ ತರಿಸಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.