ಲಕ್ನೋ: ಅಕ್ಟೋಬರ್ 17 ರಂದು ‘ಮಿಷನ್ ಶಕ್ತಿ’ ಪ್ರಾರಂಭಿಸುವ ಮೂಲಕ ಮುಂಬರುವ ನವರಾತ್ರಿ ಹಬ್ಬವನ್ನು ಮಹಿಳೆಯರ ಸುರಕ್ಷತೆ, ಘನತೆ ಮತ್ತು ಸಬಲೀಕರಣಕ್ಕಾಗಿ ಅರ್ಪಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಇಂದು ಪ್ರಕಟಿಸಿದೆ.
ಈ ಉಪಕ್ರಮವು ‘ಶಾರ್ದಿಯಾ ನವರಾತ್ರಿ’ ಯಲ್ಲಿ ಪ್ರಾರಂಭವಾಗಲಿದ್ದು, ಮುಂದಿನ ಆರು ತಿಂಗಳವರೆಗೆ ಅಂದರೆ ‘ಚೈತ್ರ ನವರಾತ್ರಿ’ಯ ಏಪ್ರಿಲ್ವರೆಗೆ ಮುಂದುವರಿಯುತ್ತದೆ.
“ಗ್ರಾಮ ಪಂಚಾಯಿತಿಗಳಿಂದ ಕೈಗಾರಿಕಾ ಘಟಕಗಳವರೆಗೆ, ಶಾಲಾ ಕ್ಯಾಂಪಸ್ಗಳು, ಸರ್ಕಾರಿ ಕಚೇರಿಗಳು, ದುರ್ಗಾ ಪೂಜಾ ಪೆಂಡಲ್ಗಳಿಂದ ಹಿಡಿದು ರಾಮ್ಲೀಲಾವರೆಗೆ ನಂಬಿಕೆಯನ್ನು ಪುನರುಚ್ಚರಿಸುವ ಮತ್ತು ಮಹಿಳಾ ಶಕ್ತಿಯನ್ನು ಅನಾವರಣಗೊಳಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು” ಎಂದು ಸರ್ಕಾರದ ವಕ್ತಾರರು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಗಳಲ್ಲಿ ಮೂಲ ಶಿಕ್ಷಣ, ಪ್ರೌಢ ಶಿಕ್ಷಣ, ಉನ್ನತ ಶಿಕ್ಷಣ, ಎಂಎಸ್ಎಂಇ, ಇತರ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಸೇರಿದಂತೆ 23 ಇಲಾಖೆಗಳು ಭಾಗವಹಿಸಲಿವೆ. ಖಾಸಗಿ ಕ್ಯಾಬ್ ಆಪರೇಟರ್ಗಳು ಸಹ ಈ ಉಪಕ್ರಮದಲ್ಲಿ ಪಾಲುದಾರರಾಗಲಿದ್ದಾರೆ.
ಕಿರುಚಿತ್ರಗಳು, ಬೀದಿ ನಾಟಕಗಳು, ಸುರಕ್ಷತಾ ಪ್ರತಿಜ್ಞೆ, ಮಹಿಳೆಯರ ಕಾನೂನುಗಳ ಬಗ್ಗೆ ಸಂವೇದನೆ ಮತ್ತು ಮಹಿಳೆಯರ ಸ್ಪೂರ್ತಿದಾಯಕ ಕಥೆಗಳ ಸಾರ್ವಜನಿಕ ಪ್ರದರ್ಶನ ಅಭಿಯಾನದಡಿ ನಡೆಯಲಿದೆ.
ಅಕ್ಟೋಬರ್ 17 ರಂದು ಪ್ರಾರಂಭವಾಗುವ ‘ಶಾರ್ದಿಯಾ ನವರಾತ್ರಿ’ ಸಂದರ್ಭದಲ್ಲಿ ಮಿಷನ್ ಶಕ್ತಿ ಉಪಕ್ರಮವು ಸಾಮೂಹಿಕ ಜಾಗೃತಿ ಕಾರ್ಯಕ್ರಮಗಳೊಂದಿಗೆ ಪ್ರಾರಂಭವಾಗುತ್ತದೆ. ದುಷ್ಟತನದ ಮೇಲೆ ಒಳ್ಳೆಯದರ ಗೆಲುವನ್ನು ಸಂಕೇತಿಸುವ ಸಲುವಾಗಿ ದೇವಿ ಮಹಿಷಾಸುರನ ವಧೆ ಮಾಡಿದ ವಿಜಯವನ್ನು ಆಚರಿಸಬೇಕು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.