ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ (ಆರ್ಕೆಎ) ರಾಷ್ಟ್ರವ್ಯಾಪಿ ಕಾಮಧೇನು ದೀಪಾವಳಿ ಅಭಿಯಾನವನ್ನು ಪ್ರಾರಂಭ ಮಾಡಿದೆ.
ಈ ಅಭಿಯಾನದ ಮೂಲಕ, ರಾಷ್ಟ್ರೀಯ ಕಾಮಧೇನು ಆಯೋಗ ಈ ದೀಪಾವಳಿ ಹಬ್ಬದಲ್ಲಿ ಹಸುವಿನ ಸಗಣಿ ಮತ್ತು ಉತ್ಪನ್ನಗಳ ವ್ಯಾಪಕ ಬಳಕೆಯನ್ನು ಮಾಡುವಂತೆ ಜನರಿಗೆ ಮನವಿ ಮಾಡಿದೆ.
ಈ ವರ್ಷದ ದೀಪಾವಳಿ ಹಬ್ಬಕ್ಕಾಗಿ ಹಸು ಸಗಣಿ ಆಧಾರಿತ ಹಣತೆ, ಮೇಣದಬತ್ತಿಗಳು, ಧೂಪ, ಸ್ವಸ್ತಿಕ, ಪುಜಾ ಸಾಮಾಗ್ರಿ, ಗಣೇಶನ ವಿಗ್ರಹಗಳು ಮತ್ತು ಲಕ್ಷ್ಮಿ ದೇವತೆಗಳ ತಯಾರಿಕೆ ಈಗಾಗಲೇ ಪ್ರಾರಂಭವಾಗಿದೆ. ದೀಪಾವಳಿಯನ್ನು ಗೋಮಯ ಮಾಡಲು ಕಾಮಧೇನು ಆಯೋಗ ಟೊಂಕ ಕಟ್ಟಿ ನಿಂತಿದೆ.
ಈ ವರ್ಷದ ದೀಪಾವಳಿಯಲ್ಲಿ ಹಸುವಿನ ಸಗಣಿಯಿಂದ ತಯಾರಿಸಿದ 33 ಕೋಟಿ ಹಣತೆಗಳನ್ನು 11 ಕೋಟಿ ಕುಟುಂಬಗಳಿಗೆ ವಿತರಿಸುವ ಉದ್ದೇಶವನ್ನು ಆಯೋಗ ಹೊಂದಿದೆ. ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿ ಈ ಆಯೋಗ ಕಾರ್ಯನಿರ್ವಹಿಸುತ್ತದೆ.
ಇಲ್ಲಿಯವರೆಗೆ ಆಯೋಗದ ಕಾರ್ಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಪವಿತ್ರ ನಗರ ಅಯೋಧ್ಯೆಯಲ್ಲಿ ಸುಮಾರು ಮೂರು ಲಕ್ಷ ಹಣತೆಗಳನ್ನು ಹೊತ್ತಿಸಲಾಗುವುದು ಮತ್ತು ಪವಿತ್ರ ನಗರವಾದ ವಾರಣಾಸಿಯಲ್ಲಿ ಒಂದು ಲಕ್ಷ ಹಣತೆಗಳನ್ನು ಬೆಳಗಿಸಲಾಗುವುದು ಎಂದು ಅದು ತಿಳಿಸಿದೆ.
ಇದು ಸಾವಿರಾರು ಹಸು ಆಧಾರಿತ ಉದ್ಯಮಿಗಳಿಗೆ ವ್ಯಾಪಾರ ಅವಕಾಶಗಳನ್ನು ಸೃಷ್ಟಿಸುವುದರ ಹೊರತಾಗಿ, ಹಸುವಿನ ಉತ್ಪನ್ನಗಳ ಬಳಕೆಯು ಶುದ್ಧ ಮತ್ತು ಆರೋಗ್ಯಕರ ವಾತಾವರಣಕ್ಕೆ ಕಾರಣವಾಗುತ್ತದೆ ಮತ್ತು ಗೋಶಾಲೆಗಳನ್ನು ಸ್ವಾವಲಂಬಿಯಾಗಿಸುತ್ತದೆ ಎಂಬುದು ಆಯೋಗದ ನಿರೀಕ್ಷೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.